Webdunia - Bharat's app for daily news and videos

Install App

Atal Bihari Vajapayee Birthday: 1996 ರಲ್ಲಿ ವಾಜಪೇಯಿ ರಾಜೀನಾಮೆ ನೀಡಿದ್ದು ಯಾಕೆ

Krishnaveni K
ಬುಧವಾರ, 25 ಡಿಸೆಂಬರ್ 2024 (08:51 IST)
ನವದೆಹಲಿ: ಬಿಜೆಪಿ ಪಕ್ಷವನ್ನು ರಾಷ್ಟ್ರೀಯ ಮಟ್ಟದಲ್ಲಿ ಅಧಿಕಾರಕ್ಕೇರುವಂತೆ ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ. ಅವರ ಜನ್ಮದಿನ ಇಂದು. 1996 ರಲ್ಲಿ ಅವರು 13 ದಿನಗಳ ಪ್ರಧಾನಿಯಾದ ಬಳಿಕ ರಾಜೀನಾಮೆ ನೀಡಿದ್ದು ಯಾಕೆ ಮತ್ತು ಭಾಷಣದಲ್ಲಿ ಏನು ಹೇಳಿದ್ದರು ನೋಡಿ.

1996 ರಲ್ಲಿ 161 ಸ್ಥಾನ ಗೆದ್ದು ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತ ಸಾಧಿಸಲು 272 ಸ್ಥಾನಗಳು ಬೇಕು. ಆದರೂ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ವಾಜಪೇಯಿಯವರಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟರು. ಅಲ್ಲದೆ ಬಹುಮತ ಸಾಧಿಸಲು 14 ದಿನಗಳ ಕಾಲಾವಕಾಶವನ್ನೂ ನೀಡಿದರು.

ಇದರ ಬೆನ್ನಲ್ಲೇ ಬಿಜೆಪಿಯ ಬಹುತೇಕ ನಾಯಕರು ಸಣ್ಣ ಸಣ್ಣ ಪಕ್ಷಗಳೊಂದಿಗೆ ಮಾತುಕತೆಗೆ ಮುಂದಾದರು. ಬಿಜೆಪಿಗೆ ಬೆಂಬಲ ನೀಡುವಂತೆ ಕೋರಿದರು. ಆದರೆ ಯಾರೂ ಬೆಂಬಲ ನೀಡಲೇ ಇಲ್ಲ. ಹೀಗಾಗಿ 14 ನೇ ದಿನಕ್ಕೆ ಸಂಸತ್ತಿಗೆ ಬಂದ ವಾಜಪೇಯಿಯವರು ವಿಶ್ವಾಸಮತ ಕೇಳುವ ಬದಲು ತಮ್ಮ 13 ದಿನಗಳ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು.

ಈ ವೇಳೆ ಅವರು ಮಾಡಿದ ಭೀಷ್ಮ ಪ್ರತಿಜ್ಞೆಯೊಂದು ಇಂದಿಗೂ ಬಿಜೆಪಿಯವರಿಗೆ ಸ್ಪೂರ್ತಿಯಾಗಿದೆ. ‘ನಾವು ಇಂದು ವಿಶ್ವಾಸಮತ ಸಾಬೀತುಪಡಿಸಲು ಸೋತಿರಬಹುದು. ನನ್ನನ್ನು ಅಧಿಕಾರದ ದುರಾಸೆಯಿಂದ ಬಹುತಮವಿಲ್ಲದಿದ್ದರೂ ಅಧಿಕಾರಕ್ಕೇರಿದ್ದೇನೆ ಎಂದು ಹಲವು ಹೀಗೆಳೆಯಬಹುದು. ಆದರೆ ಅಧಿಕಾರಕ್ಕಾಗಿ ನಾನು ಎಂದೂ ದುರಾಸೆಪಟ್ಟವನಲ್ಲ. ನಾವು ಇಷ್ಟಕ್ಕೇ ವಿಶ್ರಾಂತಿ ಪಡೆಯುವವರಲ್ಲ. ದೇವೇಗೌಡ ನೇತೃತ್ವದಲ್ಲಿ ನಿಮ್ಮದು ಪ್ರಬಲ ಮಿತ್ರಕೂಟವಾಗಿರಬಹುದು. ನೀವು ಅಧಿಕಾರಕ್ಕೇರುತ್ತಿರಬಹುದು. ತೊಂದರೆಯಿಲ್ಲ, ನಮ್ಮ ಸಂಪೂರ್ಣ ಸಹಕಾರ ಮತ್ತು ಹಾರೈಕೆ ನಿಮಗಿದೆ. ಆದರೆ ನಾವು ಇಲ್ಲಿಗೆ ವಿರಮಿಸುವುದಿಲ್ಲ. ಮುಂದೊಂದು ದಿನ ಬಹುಮತದೊಂದಿಗೆ ಬಂದೇ ಬರುತ್ತೇವೆ. ದೇಶದ ಹಿತಕ್ಕಾಗಿ ನಾವು ಕೆಲಸ ಮಾಡುತ್ತಲೇ ಇರುತ್ತೇವೆ’ ಎಂದು ವಾಜಪೇಯಿ ಶಪಥ ಮಾಡಿ ರಾಜೀನಾಮೆ ಸಲ್ಲಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಬಿಡದಿಯ ಮೂಕ ಬಾಲಕಿಯ ಹತ್ಯೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌, ಸಿಸಿಟಿವಿಯಲ್ಲಿ ಸೆರೆಯಾಯಿತು ಸಾವಿನ ಅಸಲಿ ಕಾರಣ

ಏನ್ರಿ ಅದು ಕ್ಷಮೆ, ಮೊದಲು ನಡತೆಯಲ್ಲಿ ಬದಲು ಮಾಡಿಕೊಳ್ಳಿ: ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆಗೆ ವಿಜಯ್ ಶಾಗೆ ಗದರಿದ ಸುಪ್ರೀಂ

ನಾವು ಎಲ್ಲಿ ಪ್ರತಿ ತಿಂಗಳು ಹಣ ಕೊಡ್ತೀವಿ ಅಂತಾ ಹೇಳಿದ್ವಿ: ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments