Webdunia - Bharat's app for daily news and videos

Install App

Waqf ಕಾನೂನು ಹಿಂದೆ ಹೇಗಿತ್ತು, ಈಗ ಏನಾಗಿದೆ, ನಿಜವಾಗಿಯೂ ಇದು ಮುಸ್ಲಿಮರಿಗೆ ಮಾರಕವೇ: ಇಲ್ಲಿದೆ ಡೀಟೈಲ್ಸ್

Krishnaveni K
ಗುರುವಾರ, 3 ಏಪ್ರಿಲ್ 2025 (09:51 IST)
ನವದೆಹಲಿ: ವಕ್ಫ್ ತಿದ್ದುಪಡಿ ಬಿಲ್ ನಿನ್ನೆ ತಡರಾತ್ರಿ ಲೋಕಸಭೆಯಲ್ಲಿ ಪಾಸ್ ಆಗಿದೆ. ಈ ಹೊಸ ಕಾಯಿದೆಯಲ್ಲಿ ಏನಿದೆ, ಈ ಮೊದಲು ಹೇಗಿತ್ತು? ಈ ಹೊಸ ಕಾಯಿದೆ ನಿಜವಾಗಿಯೂ ಮುಸ್ಲಿಮರಿಗೆ ಮಾರಕವೇ ಇಲ್ಲಿದೆ ಡೀಟೈಲ್ಸ್.

ಬಹುಚರ್ಚಿತ ವಕ್ಫ್ ತಿದ್ದುಪಡಿ ಬಿಲ್ ನ್ನು ನಿನ್ನೆ ತಡರಾತ್ರಿ ಲೋಕಸಭೆಯಲ್ಲಿ ಬಹುತಮತದಿಂದ ಅಂಗೀಕಾರವಾಯಿತು. ಈ ಹೊಸ ಮಸೂದೆಯಲ್ಲಿರುವ ಕೆಲವು ಅಂಶಗಳು ಅಕ್ರಮವಾಗಿ ವಕ್ಫ್ ಆಸ್ತಿಯನ್ನು ಕಬಳಿಸುವವರಿಗೆ ನಿಜಕ್ಕೂ ಅಂಕುಶ ಹಾಕಲಿದೆ. ಆದರೆ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು ಇರಲಿದ್ದಾರೆ ಎನ್ನುವುದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ವಕ್ಫ್ ಮಂಡಳಿಯ ಪರಮಾಧಿಕಾರಕ್ಕೂ ಕತ್ತರಿ ಬಿದ್ದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ವಕ್ಫ್ ಕಾನೂನು ಹಿಂದೆ ಹೇಗಿತ್ತು?
-ಈ ಮೊದಲು ಯಾರು ಬೇಕಾದರೂ ವಕ್ಫ್ ಗೆ ಭೂಮಿ ದಾನ ಮಾಡಬಹುದಾಗಿತ್ತು. ಮುಸ್ಲಿಮರೇ ಆಗಿರಬೇಕೆಂದಿರಲಿಲ್ಲ.
-ಆಸ್ತಿ ಕುರಿತ ಯಾವುದೇ ತಕರಾರುಗಳನ್ನು ವಕ್ಫ್ ಮಂಡಳಿಯೇ ನಿರ್ವಹಿಸುತ್ತಿತ್ತು.
-ವಕ್ಫ್ ಕುರಿತ ವ್ಯಾಜ್ಯಗಳಲ್ಲಿ ಕೋರ್ಟ್ ಮಧ್ಯಪ್ರವೇಶಿಸುವಂತಿರಲಿಲ್ಲ
-ವಕ್ಫ್ ಗೆ ಪರಮಾಧಿಕಾರ ನೀಡಲು ಸೆಕ್ಷನ್ 40 ಜಾರಿಯಲ್ಲಿತ್ತು.
-ಭೂಮಿ ಪರಿಶೀಲನೆಗೆ ಡಿಸಿಗೆ ಸಂಪೂರ್ಣ ಅಧಿಕಾರವಿತ್ತು.
-ಮಂಡಳಿಯಲ್ಲಿ ಕೇವಲ ಒಬ್ಬ ಮುಸ್ಲಿಮೇತರ ಸದಸ್ಯನಿರಬಹುದಿತ್ತು.
-ವಕ್ಫ್ ಮಂಡಳಿ ವಶಪಡಿಸಿಕೊಂಡ ಆಸ್ತಿ ಅದರದ್ದೇ ಆಗಿತ್ತು, ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ.

ಹೊಸ ಕಾಯಿದೆಯಲ್ಲಿ ತಿದ್ದುಪಡಿ ಏನಾಗಿದೆ?
-5 ವರ್ಷ ಮುಸ್ಲಿಂ ಧರ್ಮ ಪಾಲಿಸಿದವರಿಗೆ ಮಾತ್ರ ವಕ್ಫ್ ಗೆ ದಾನ ಮಾಡಲು ಸಾಧ್ಯವಿದೆ.
-ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರು ಇರಲಿದ್ದಾರೆ.
-ಸೆಕ್ಷನ್ 40 ರದ್ದಾಗಲಿದ್ದು, ಮಾಲಿಕತ್ವವನ್ನು ಕೋರ್ಟ್ ನಲ್ಲಿ ಪ್ರಶ್ನಿಸಲು ಅವಕಾಶವಿರಲಿದೆ.
-ಜಿಲ್ಲಾಧಿಕಾರಿ ಬದಲು ರಾಜ್ಯಕ್ಕೆ ಪ್ರತ್ಯೇಕ ಅಧಿಕಾರ ನೇಮಕವಾಗಲಿದೆ.
-ರಾಜ್ಯಗಳು ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ನೇಮಿಸಬಹುದು.
-ಗೊಂದಲಗಳಿದ್ದಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾಜಾದ ಮೇಲೆ ಮುಗಿಯದ ಇಸ್ರೇಲ್‌ ಟಾರ್ಗೆಟ್‌, ದಾಳಿಗೆ 64 ಪ್ಯಾಲೆಸ್ತೀನಿಯರು ಸಾವು

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್‌: ಹರಿಯಾಣ ಪ್ರೊಪ್ರೆಸರ್ ಅರೆಸ್ಟ್‌

ಪಾಕಿಸ್ತಾನಕ್ಕೆ ಬೇಹುಗಾರಿಕೆ: ನಮ್ಮವರೇ ಹೀಗೇ ಮಾಡಿದ್ರೆ ಏನ್‌ ಮಾಡೋದು

ಪಾಕ್‌ನಲ್ಲಿ ತೀವ್ರವಾದ ಆಹಾರ ಅಭದ್ರತೆ: 11ಮಿಲಿಯನ್ ಜನರ ಮೇಲೆ ಪರಿಣಾಮ ಸಾಧ್ಯತೆ

ದೇವೇಗೌಡರಿಗೆ 92ನೇ ಜನ್ಮದಿನದ ಸಂಭ್ರಮ: ಮೋದಿ, ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

ಮುಂದಿನ ಸುದ್ದಿ
Show comments