Webdunia - Bharat's app for daily news and videos

Install App

ಬಾಲಿ ದ್ವೀಪದಲ್ಲಿ ಭೂಕಂಪ ಸಂತ್ರಸ್ತರಿಗೆ ರಾಜ್ಯದ ಯುವಕ ನೆರವು

Webdunia
ಶನಿವಾರ, 11 ಆಗಸ್ಟ್ 2018 (14:23 IST)
ಇಂಡ್ಯೋನೇಷ್ಯಾದ ಬಾಲಿ ಸಮೀಪದ ಗಿಲಿ ದ್ವೀಪದ ಲೊಂಬ್ಯಾಕ್ ನಲ್ಲಿ ಬೆಳಗಿನ ಜಾವ ಭಾರಿ ಭೂಕಂಪ ಸಂಭವಿಸಿದೆ. ಪದೇ ಪದೇ ಭೂಕಂಪ ಆಗುತ್ತಿದ್ದ ಅಪಾರ ಸಾವು-ನೋವು ಸಂಭವಿಸಿದೆ. ಭೂಕಂಪದಿಂದ ಗಾಯಗೊಂಡವರ ನೆರವಿಗೆ ರಾಜ್ಯದ ಯುವಕ ನೆರವು ನೀಡುತ್ತಿದ್ದಾರೆ.

ಭೂಕಂಪನಕ್ಕೆ ನೂರಾರು ಜನರು ಸಾವನ್ನಪ್ಪಿದ್ದು, ನೂರಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. 6.9 ಮ್ಯಾಗ್ನಿಟುಡ್ ಕಂಪನಕ್ಕೆ ಭೂ ತತ್ತರಿಸಿದ್ದು, ಈ ಹಿಂದೆ ಕೂಡ ಇಲ್ಲಿ ನಿರಂತರವಾಗಿ ಭೂಕಂಪನವಾಗುತ್ತಲೇ ಇದೆ. ಈವರೆಗೆ 259 ಜನ ಸಾವನ್ನಪ್ಪಿದ್ದಾರೆ. 1053 ಜನ ಗಾಯಗೊಂಡಿದ್ದಾರೆ. 2 ಲಕ್ಷ 70 ಸಾವಿರಕ್ಕೂ ಅಧೀಕ ಜನ ಮನೆ ಕಳೆದುಕೊಂಡಿದ್ದಾರೆ. ಕಳೆದ ಆಗಸ್ಟ್ 5ರಂದು ಸಂಭವಿಸಿದ್ದ ಭೂಕಂಪನದಲ್ಲಿ 350 ಜನ ಸಾವನ್ನಪ್ಪಿದ್ದರು. ನಾಲ್ಕು ದಿನಗಳ ಅಂತರದಲ್ಲೇ ಭಾರೀ ಭೂಕಂಪನವಾಗಿದ್ದಕ್ಕೆ ನೂರಾರು ಜನ ಸಾವನ್ನಪ್ಪಿದ್ದು, ಇದರಿಂದಾಗಿ ಇಡೀ ಇಂಡ್ಯೋನೇಷ್ಯಾ ದೇಶವನ್ನೇ ಸ್ಥಬ್ಧಗೊಳಿಸುವಂತೆ ಮಾಡಿದೆ.

ಗಾಯಾಳುಗಳ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಧಾರವಾಡದ ಮಾಳಮಡ್ಡಿ ನಿವಾಸಿಯಾಗಿರುವ ಕನ್ನಡಿಗ ರೋಶನ್ ಸಿಂಗ್ ನವಲೂರು ಅವರು ಕೈ ಜೋಡಿಸಿದ್ದಾರೆ. ಅಲ್ಲಿನ ಪರಿಸ್ಥೀತಿಯನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿರುವ ಅವರು, ಸದ್ಯ ಇಂಡ್ಯೋನೇಷ್ಯಾದ  ವಾಣಿಜ್ಯ ನಗರಿ ಸುರಬಾಯ ನಗರದಲ್ಲಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ಸಹಾಯ ಮಾಡುತ್ತಿದ್ದು, ವಿವಿಧ ಆಸ್ಪತ್ರೆಗಳ ತುರ್ತು ನಿಗಾ ಘಟಕದ ವಾರ್ಡ್ ಗಳಲ್ಲಿ ರೋಗಿಗಳ ಹಸ್ತಾಂತರಕ್ಕೆ ನೆರವು ನೀಡುತ್ತಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌ಗೆ ಬೆಂಬಲ ಸೂಚಿಸಿದ ಟರ್ಕಿ: ಸೇಬು ಬೆನ್ನಲ್ಲೇ ಆಭರಣಕ್ಕೂ ಭಾರತದಲ್ಲಿ ಬಹಿಷ್ಕಾರ

India Pakistan: ಯಶಸ್ವಿಯಾಗಿ ಪಾಕ್‌ನ 600 ಡ್ರೋನ್‌ಗಳನ್ನು ಉರುಳಿಸಿದ ಭಾರತದ ವಾಯುಪಡೆ

ಉತ್ತರಪ್ರದೇಶ: ಕೂದಲು ಕಸಿ ಮಾಡಲು ಹೋಗಿ ಜೀವ ಕಳೆದುಕೊಂಡ ಇಬ್ಬರು ಎಂಜಿನಿಯರ್‌ಗಳು

ಲಿಂಗಸುಗೂರು: ಜಾಮೀನು ವಿಚಾರಕ್ಕೆ ವಿಷ ಕುಡಿಸಿ ವ್ಯಕ್ತಿಯ ಕೊಲೆ, 10ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪ್ರೀತಿಸಿ ಮದುವೆಯಾದ ಹಿಂದೂ ಯುವಕ- ಮುಸ್ಲಿಂ ಯುವತಿ, ರಕ್ಷಣೆ ಕೋರಿದ ನವಜೋಡಿ

ಮುಂದಿನ ಸುದ್ದಿ
Show comments