Webdunia - Bharat's app for daily news and videos

Install App

ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ ಪತಿ!

Webdunia
ಸೋಮವಾರ, 29 ನವೆಂಬರ್ 2021 (10:02 IST)
ಬೆಂಗಳೂರು : ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತನ್ನ ಪತ್ನಿಯನ್ನೇ ಹತ್ಯೆಗೈದು ಪರಾರಿಯಾಗಿದ್ದವನು ಆಂಧ್ರದಲ್ಲಿ ಬೀದಿ ಹೆಣವಾಗಿ ಪತ್ತೆಯಾಗಿದ್ದಾನೆ.
ರಾಜೇಂದ್ರ ನಗರದ ಆಯೇಷಾ (45) ಕೊಲೆಯಾದವರು. ಇವರ ಪತಿ ನಿಸಾರ್ (50) ಆಂಧ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು. ಹೆಚ್ಚಾಗಿ ಮನೆಯಲ್ಲಿ ಇರದ ನಿಸಾರ್, ಮಸೀದಿಗಳಲ್ಲಿ ಚಂದಾ ವಸೂಲಿ ಮಾಡಿ ಮದರಸಗೆ ನೀಡುವ ಕೆಲಸ ಮಾಡುತ್ತಿದ್ದ.
ಮನೆಗೆ ಬಂದ ವೇಳೆಯಲ್ಲೆಲ್ಲ ಪತ್ನಿಯ ಶೀಲ ಶಂಕಿಸಿ ಆಕೆಯೊಂದಿಗೆ ಜಗಳ ಮಾಡುತ್ತಿದ್ದ. ಇದೇ ರೀತಿ ಜಗಳವಾಗುತ್ತಿದ್ದರಿಂದ ನ.19ರಂದು ಪತ್ನಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ.
ಪತ್ನಿ ಕೊಲೆ ಮಾಡಲೆಂದು ಬಂಕ್ನಿಂದ ಪೆಟ್ರೋಲ್ ಖರೀದಿಸಿ ಮನೆಗೆ ಬಂದಿದ್ದ. ಆಯೇಷಾ ಜತೆಗೆ ಮೊಮ್ಮಗಳೂ ಇದ್ದಳು. ಮಗು ಮನೆಯಲ್ಲಿದ್ದರೆ ಪತ್ನಿ ಹತ್ಯೆ ಮಾಡುವುದು ಕಷ್ಟ ಎಂದು ಭಾವಿಸಿ ಮೊದಲು ಅಳಿಯನಿಗೆ ಕರೆ ಮಾಡಿ, ಮೊಮ್ಮಗಳನ್ನು ನೋಡಬೇಕು ಅನಿಸುತ್ತಿದೆ.
ನೀಲಸಂದ್ರ ಸಂಬಂಧಿ ಮನೆಗೆ ಕರೆತರುವಂತೆ ಹೇಳಿದ್ದ. ಅದರಂತೆ ಅಳಿಯ ತನ್ನ ಮಗಳನ್ನು ಕರೆದುಕೊಂಡು ನೀಲಸಂದ್ರ ಕಡೆ ಹೋಗುತ್ತಿದ್ದಂತೆಯೇ, ಇತ್ತ ಮನೆಯಲ್ಲಿದ್ದ ಮಗ ಮತ್ತು ಸೊಸೆ ಕೆಲಸಕ್ಕೆ ತೆರಳಿದ್ದರು.
ಇದೇ ಸಮಯಕ್ಕೆ ಕಾಯುತ್ತಿದ್ದ ಆರೋಪಿ ನಿಸಾರ್ ಮಧ್ಯಾಹ್ನ 3 ಗಂಟೆಗೆ ತನ್ನ ಮನೆಗೆ ಬಂದು ಪತ್ನಿ ಬಳಿ ಸಣ್ಣ ಸಿಲಿಂಡರ್ ಕೊಡುವಂತೆ ಸೂಚಿಸಿದ್ದ. ಪತ್ನಿ ಸಿಲಿಂಡರ್ ತರಲು ಹೋಗುತ್ತಿದ್ದಂತೆ ಆಕೆಯ ಮೇಲೆ ಪೆಟ್ರೋಲ್ ಸುರಿದಿದ್ದ. ಆತಂಕಗೊಂಡ ಪತ್ನಿ ಆಯೇಷಾ ಪತಿಯನ್ನು ಹೊರ ಹಾಕಿ ತಕ್ಷಣ ಬಾಗಿಲು ಲಾಕ್ ಮಾಡಿಕೊಂಡಿದ್ದಳು.
ಆಕ್ರೋಶಗೊಂಡ ನಾಸಿರ್ ಮನೆಯ ಕಿಟಕಿ ಗಾಜನ್ನು ಒಡೆದಿದ್ದಾನೆ. ಈ ವೇಳೆ ಒಡೆದ ಗಾಜಿನ ಚೂರು ನಾಸಿರ್ ಬಲಗೈ ಸೀಳಿ ರಕ್ತ ಹರಿದಿತ್ತು. ಇಷ್ಟಾದರೂ ಸುಮ್ಮನಾಗದ ಆರೋಪಿ ನಾಸಿರ್ ಕಿಟಕಿಯಿಂದಲೇ ಬೆಂಕಿ ಕಡ್ಡಿ ಗೀರಿ ಆಯೇಷಾ ಮೇಲೆ ಎಸೆದಿದ್ದ. ಪರಿಣಾಮ ಆಯೇಷಾ ಮೈಗೆ ಬೆಂಕಿ ಹೊತ್ತಿಕೊಂಡಿತ್ತು.
ಕಿಟಕಿ ಬಳಿ ಇದ್ದ ನಾಸಿರ್ ಮುಖಕ್ಕೂ ಬೆಂಕಿಯಿಂದ ಸುಟ್ಟ ಗಾಯಗಳಾಗಿತ್ತು. ಆಯೇಷಾ ಚೀರಾಟ ಕೇಳಿ ನೆರೆ-ಹೊರೆಯವರು ಬರುವ ವೇಳೆ ನಿಸಾರ್ ಆಂಧ್ರಪ್ರದೇಶದ ಬಸ್ಸನ್ನೇರಿ ಪರಾರಿಯಾಗಿದ್ದ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕಿಸ್ತಾನ ಪರ ಬೇಹುಗಾರಿಗೆ: ಎನ್‌ಐಎಯಿಂದ ಯೂಟ್ಯೂಬರ್‌ ಜ್ಯೋತಿಗೆ ನಾನಾ ರೀತಿಯಲ್ಲಿ ಪ್ರಶ್ನೆ

ಕನ್ನಡ ಮಾತೇ ಆಡಲ್ಲ, ಹಿಂದಿ ರಾಷ್ಟ್ರ ಭಾಷೆ ಏನಿವಾಗ? SBI ಅಧಿಕಾರಿಯ ದರ್ಪ: video

Pahalgam Attack, ಅಂದು ಮೋದಿ ಎಚ್ಚರಿಕೆ ನೀಡುತ್ತಿದ್ದರೆ 26 ಮಂದಿಯ ಜೀವ ಉಳಿಯುತ್ತಿತ್ತು: ಮಲ್ಲಿಕಾರ್ಜುನ ಖರ್ಗೆ

ಅಂದು ನಾವು ನೀಡಿದ ಅನುದಾನದಲ್ಲಿ ಕಾಮಗಾರಿ ಮಾಡ್ತಿದ್ರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ: ಆರ್‌ ಅಶೋಕ್‌

IMD, ಕೇರಳಕ್ಕೆ ನಾಲ್ಕೈದು ದಿನಗಳಲ್ಲಿ ಮುಂಗಾರು ಪ್ರವೇಶ

ಮುಂದಿನ ಸುದ್ದಿ
Show comments