Webdunia - Bharat's app for daily news and videos

Install App

ನ್ಯಾಯಾಧೀಶರ ವಿರುದ್ಧವೇ ಅತ್ಯಾಚಾರ ಆರೋಪ ದಾಖಲು; ಇಂದು ನ್ಯಾಯಾಧೀಶ ಅರೆಸ್ಟ್

Webdunia
ಬುಧವಾರ, 15 ಆಗಸ್ಟ್ 2018 (20:02 IST)
ಹೈದರಾಬಾದ್ : ದೇಶದಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇಂತಹ ಘಟನೆಗಳನ್ನು ಖಂಡಿಸಿ ಶಿಕ್ಷೆ ವಿಧಿಸಿಬೇಕಾದ  ನ್ಯಾಯಾಧೀಶರ ವಿರುದ್ಧವೇ ಅತ್ಯಾಚಾರ ಆರೋಪ ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ಇದೀಗ ಅವರನ್ನು ಬಂಧಿಸಲಾಗಿದೆ.


ಸೂರ್ಯಪೇಟ್​ ಜಿಲ್ಲೆಯ  ತುಂಗಾತುರ್ಥಿ ಜೂನಿಯರ್​ ಸಿವಿಲ್​ ಜಡ್ಜ್​ ಟಿ ಸತ್ಯನಾರಾಯಣ ಅವರು  ಮಹಿಳೆಯೊಬ್ಬರನ್ನುಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಮತ್ತೊಬ್ಬಳನ್ನ ಮದುವೆಯಾಗಲು ತಯಾರಿ ನಡೆಸಿದ್ದರಂತೆ. ಇದನ್ನ ಪ್ರಶ್ನಿಸಿ ನ್ಯಾಯಾಧೀಶರನ್ನ ಮಹಿಳೆ ಭೇಟಿ ಮಾಡಲು ತೆರಳಿದಾಗ  ದೌರ್ಜನ್ಯ ಎಸಗಿದ್ದರಂತೆ.  ಹೀಗಾಗಿ ಮಹಿಳೆ ಪೊಲೀಸ್ ಠಾಣೆಯಲ್ಲಿ ಜಡ್ಜ್​ ವಿರುದ್ಧ ವಂಚನೆ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಜಡ್ಜ್​ ವಿರುದ್ಧ  ಸೆಕ್ಷನ್​ 376( ರೇಪ್​) 420 ( ಮೋಸ)  ಹಾಗೂ ಎಸ್​ಸಿ/ ಎಸ್​ಟಿ  ಪ್ರಿವೆನ್ಷನ್​ ಆ್ಯಕ್ಟ್​  ಪ್ರಕಾರ ಕೇಸ್​ ದಾಖಲಾಗಿದೆ.


ಈ ಸಂಬಂಧ  ಮಹಿಳಾ ವಕೀಲರು ದೂರು ಸಲ್ಲಿಸಿ 11 ದಿನಗಳ ಬಳಿಕ  ಚಿಕ್ಕದಪಲ್ಲಿ ಪೊಲೀಸರು ಹೈದರಾಬಾದ್​ ಹೈಕೋರ್ಟ್​​ ಒಪ್ಪಿಗೆ ಪಡೆದು ಬುಧವಾರ (ಇಂದು )ನ್ಯಾಯಾಧೀಶರನ್ನ ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಸತ್ಯನಾರಾಯಣ ಅವರ ಮೇಲೆ ಆರೋಪ ಬಂದಿರುವ ಹಿನ್ನಲೆಯಲ್ಲಿ ಹೈಕೋರ್ಟ್​ ಟಿ. ಸತ್ಯನಾರಾಯಣ ಅವರನ್ನ  ಅಮಾನತು ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

I Stand With You: ಬೆಂಗಳೂರಿನ ಜನತೆಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್‌

ಬೆಂಗಳೂರು ಮುಳುಗಿರುವಾಗ ಸಾಧನೆ ಸಮಾವೇಶ ಯಾಕೋ: ವಿಜಯೇಂದ್ರ ಲೇವಡಿ

Bengaluru Rains: ಬೆಂಗಳೂರಿನಲ್ಲಿ ಮಳೆ ಬಂದಾಗ ಸಮಸ್ಯೆಯಾಗೋದು ಹೊಸದೇನಲ್ಲ: ಡಿಕೆ ಶಿವಕುಮಾರ್

Bengaluru Rains: ಗ್ರೇಟರ್ ಬೆಂಗಳೂರು ಅಲ್ಲ ಇದು ವಾಟರ್ ಬೆಂಗಳೂರು

ಸಿಲಿಕಾನ್‌ ಸಿಟಿಯಲ್ಲಿ ಮಹಾಮಳೆಗೆ ಮೊದಲ ಬಲಿ: ಗೋಡೆ ಕುಸಿದು ಮಹಿಳಾ ಉದ್ಯೋಗಿ ಸಾವು

ಮುಂದಿನ ಸುದ್ದಿ
Show comments