Webdunia - Bharat's app for daily news and videos

Install App

ರಿವಾಲ್ವರ್‌ ಹಿಡಿದು ಚಿನ್ನ ಕಳ್ಳತನಕ್ಕೆ ಬಂದ ಖದೀಮರಿಗೆ ಕೋಲಿನ ಪೆಟ್ಟು ತೋರಿಸಿದ ಮಾಲೀಕ

Sampriya
ಬುಧವಾರ, 14 ಆಗಸ್ಟ್ 2024 (20:04 IST)
Photo Courtesy X
ಪುಣೆ: ಇಲ್ಲಿನ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ನಾಲ್ವರು ರಿವಾಲ್ವರ್ ಹೊತ್ತ ಖದೀಮರನ್ನು ಮಾಲೀಕರೊಬ್ಬರು ಕೋಲನ್ನು ಹಿಡಿದು ಅವರನ್ನು ಓಡಿಸಿರುವ ಘಟನೆ ನಡೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಾಲೀಕ ತನ್ನ ಕೋಲಿನಿಂದ ಖದೀಮರನ್ನು ಅಟ್ಟಾಡಿಸಿ ಓಡಿಸುತ್ತಿರುವ ಹರಸಾಹಸದ ವಿಡಿಯೋ ನೋಡಿ ನೆಟ್ಟಿಗರು ನಿಬ್ಬೆರೆಗಾಗಿದ್ದಾರೆ.

ವೈರಲ್ ವಿಡಿಯೋದಲ್ಲಿ ದರೋಡೆಕೋರರು ಏಕಾಏಕಿ ಅಂಗಡಿಯೊಳಗೆ ನುಗ್ಗಿ ರಿವಾಲ್ವರ್ ಹಿಡಿದು ಮಾಲೀಕನನ್ನು ಬೆದರಿಸಿ, ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಇದಕ್ಕೆ ಬಗ್ಗದ ವ್ಯಾಪಾರಿ ತನ್ನಲ್ಲಿದ್ದ ಕೋಲನ್ನು ಹಿಡಿದು ಹೊಡೆಯಲು ಹೋಗಿದ್ದಾನೆ. ಒಬ್ಬ ರಿವಾಲ್ವರ್ ಹೊಂದಿದ್ದ ಖದೀಮ ಆತನ ಮೇಲೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಅಂಗಡಿಯ ಮಾಲೀಕನಿಗೆ ಯಾವುದೇ ಗಾಯವಾಗಿಲ್ಲ. ಕೋಲನ್ನು ಹಿಡಿದು ಅವರನ್ನು ಅಟ್ಟಾಡಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉಪ ಪೊಲೀಸ್ ಆಯುಕ್ತ ಅಮರ್ ಸಿಂಗ್ ಜಾಧವ್ ಮಾತನಾಡಿ, ಈ ಪ್ರಕರಣ ತನಿಖೆಯಲ್ಲಿದ್ದು, ಸ್ಥಳೀಯ ಜನರು ಗ್ಯಾಂಗ್ ಸದಸ್ಯರನ್ನು ಬೆನ್ನಟ್ಟಿ ಒಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

"ನಾಲ್ವರು ದರೋಡೆಕೋರರು ರಿವಾಲ್ವರ್‌ಗಳನ್ನು ಹೊತ್ತೊಯ್ದು ಮಧ್ಯಾಹ್ನದ ಸುಮಾರಿಗೆ ಬಾಲ್ಕಮ್ ಪ್ರದೇಶದ ಆಭರಣ ಅಂಗಡಿಯೊಂದಕ್ಕೆ ನುಗ್ಗಿ ಅಂಗಡಿಯವರಿಗೆ ಬೆದರಿಕೆ ಹಾಕಿದರು. ಅವರು ಆತನಿಗೆ ಕೋಲಿನಿಂದ  ಹೊಡೆದು ಓಡಿಸಿದ್ದಾರೆ" ಎಂದು ಅವರು ಹೇಳಿದರು.

ದರೋಡೆಕೋರರು ಚಿನ್ನಾಭರಣಗಳನ್ನು ಕದಿಯಲು ಪ್ರಯತ್ನಿಸುತ್ತಿರುವಾಗ, ಅಂಗಡಿಯವನು ಎಚ್ಚರಿಕೆಯನ್ನು ಎತ್ತಿ ಮರದ ಕೋಲಿನಿಂದ ದರೋಡೆಕೋರರ ಮೇಲೆ ಚಾರ್ಜ್ ಮಾಡಿ ಪರಾರಿಯಾಗಲು ಕಾರಣವಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ಕಪುರಬಾವಡಿ ಪೊಲೀಸ್ ಠಾಣೆಯ ಪೊಲೀಸ್ ತಂಡವು ಆರೋಪಿಯನ್ನು ವಶಕ್ಕೆ ಪಡೆದಿದೆ. ಗ್ಯಾಂಗ್‌ನ ಇತರ ಮೂವರು ಸದಸ್ಯರಿಗಾಗಿ ಶೋಧವನ್ನು ಪ್ರಾರಂಭಿಸಲಾಯಿತು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments