Publish Date: Tue, 03 Oct 2017 (17:47 IST)
Updated Date: Tue, 03 Oct 2017 (17:49 IST)
ನವದೆಹಲಿ: ರಾಷ್ಟ್ರಪಿತ ಗಾಂಧೀಜಿಯವರ ಕನಸಾದ ಸ್ವಚ್ಛ್ ಭಾರತ್ ಯೋಜನೆ ಬಗ್ಗೆ ಪ್ರಧಾನಿ ಮೋದಿ ಸದಾ ಮಾತನಾಡುತ್ತಾರೆ. ಇದೀಗ ಕೃತಿಯಲ್ಲೂ ಮಾಡಿ ತೋರಿಸಿದ್ದಾರೆ.
ದಸರಾ ಉತ್ಸವದ ಆಚರಣೆ ಸಲುವಾಗಿ ಕೆಂಪು ಕೋಟೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನಿ ಮೋದಿ ಆರತಿ ಮಾಡಿದ ನಂತರ ತಮಗೆ ಬಳಸಲು ನೀಡಿದ್ದ ಟಿಶ್ಯೂ ಪೇಪರ್ ನನ್ನು ನೆಲಕ್ಕೆ ಹಾಕದೇ ಪಾಕೆಟ್ ಒಳಗೆ ಇಟ್ಟುಕೊಂಡಿದ್ದಾರೆ.
ಈ ಮೂಲಕ ಸ್ವಚ್ಛ್ ಭಾರತ್ ಬಗ್ಗೆ ಮಾತನಾಡುವ ಪ್ರಧಾನಿ ತಾವೇ ಅದನ್ನು ಮಾಡಿ ತೋರಿಸಿದ್ದಾರೆ. ಹಿಂದೊಮ್ಮೆ ಪುಸ್ತಕ ಬಿಡುಗಡೆ ಸಮಾರಂಭದಲ್ಲೂ ಕಸವನ್ನು ನೆಲದಲ್ಲಿ ಬಿಸಾಕದೇ ತಮ್ಮ ಪಾಕೆಟ್ ಒಳಗಿಟ್ಟುಕೊಂಡ ಪ್ರಧಾನಿ ಮೋದಿ ಫೋಟೋ ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ