Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚಂಡೀಗಢ : ಭದ್ರತಾ ಲೋಪಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ನ ಫಿರೋಜ್ಪುರದಲ್ಲಿ ರ್ಯಾಲಿ ರದ್ದು ಮಾಡಿದ್ದಾರೆ.
ಪಂಜಾಬಿ ಚಾನೆಲ್ನ ಟಿವಿ ಸಂದರ್ಶನದಲ್ಲಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪಂಜಾಬ್ ಸಿಎಂ ಚರಣ್ಜಿತ್ ಚನ್ನಿ, “ಯಾವುದೇ ಭದ್ರತಾ ಲೋಪವಾಗಿಲ್ಲ.
ಪ್ರಧಾನ ಮಂತ್ರಿಯವರ ರಸ್ತೆ ಯೋಜನೆಗಳನ್ನು ಕೊನೆಯ ಕ್ಷಣದಲ್ಲಿ ಮಾಡಲಾಯಿತು. ಅವರು ಹೆಲಿಕಾಪ್ಟರ್ನಲ್ಲಿ ಹೋಗಬೇಕಿತ್ತು.
ಅವರ ರ್ಯಾಲಿಗಾಗಿ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳಲು ನಾನು ತಡರಾತ್ರಿವರೆಗೆ ಇದ್ದೆ, ರ್ಯಾಲಿಗಾಗಿ 70,000 ಕುರ್ಚಿಗಳನ್ನು ಹಾಕಲಾಗಿತ್ತು ಆದರೆ 700 ಜನರು ಮಾತ್ರ ಬಂದರು ಎಂದು ಹೇಳಿದ್ದಾರೆ.