Webdunia - Bharat's app for daily news and videos

Install App

MP Salary hike: ಸಂಸದರ ವೇತನವೂ ಹೆಚ್ಚಳ: ಎಷ್ಟು ಏರಿಕೆ ಮಾಡಲಾಗಿದೆ, ಸಂಸದರ ವೇತನವೆಷ್ಟು ಇಲ್ಲಿದೆ ಡೀಟೈಲ್ಸ್

Krishnaveni K
ಮಂಗಳವಾರ, 25 ಮಾರ್ಚ್ 2025 (11:57 IST)
ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಶಾಸಕರ ವೇತನ, ಭತ್ಯೆ ಹೆಚ್ಚಳ ಮಾಡಿತ್ತು. ಇದೀಗ ಕೇಂದ್ರ ಸರ್ಕಾರವೂ ಸಂಸದರ ವೇತನ, ಭತ್ಯೆ, ಪಿಂಚಣಿ ಹೆಚ್ಚಳ ಮಾಡಿದೆ. ಎಷ್ಟು ಏರಿಕೆ ಮಾಡಲಾಗಿದೆ, ಸಂಸದರ ವೇತನವೆಷ್ಟು ಇಲ್ಲಿದೆ ಡೀಟೈಲ್ಸ್.

 
ಸಂಸದೀಯ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಅದರಂತೆ ಸಂಸದರ ವೇತನ, ದಿನಭತ್ಯೆ ಮತ್ತು ಮಾಜಿ ಸಂಸದರ ಪಿಂಚಣಿಯನ್ನೂ ಹೆಚ್ಚಿಸಲಾಗಿದೆ. ಈ ಹೊಸ ವೇತನ ಏಪ್ರಿಲ್ 1 ರಿಂದಲೇ ಜಾರಿಗೆ ಬರಲಿದೆ.

ಇದುವರೆಗೆ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಸಂಬಳ 1 ಲಕ್ಷ ರೂ. ಮತ್ತು ದಿನಭತ್ಯೆ 2,000 ರೂ.ಗಳಿತ್ತು. ಇದೀಗ ಸಂಸದರ ವೇತನವನ್ನು 24 ಸಾವಿರ ರೂ. ಹೆಚ್ಚಿಸಲಾಗಿದ್ದು, ಇನ್ನೀಗ ಸಂಸದರಿಗೆ 1.24 ಲಕ್ಷ ರೂ. ಸಂಬಳ ಸಿಗಲಿದೆ. ದಿನಭತ್ಯೆಯನ್ನು 2,000 ರೂ.ಗಳಿಂದ 2,500 ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಮಾಜಿ ಸಂಸದರ ಪಿಂಚಣಿಯನ್ನೂ ಏರಿಕೆ ಮಾಡಲಾಗಿದೆ. ಇದುವರೆಗೆ ಮಾಜಿ ಸಂಸದರಿಗೆ 25,000 ರೂ. ಪಿಂಚಣಿ ಸಿಗುತ್ತಿತ್ತು. ಇನ್ನೀಗ 31,000 ರೂ. ಸಿಗಲಿದೆ. 2018 ರಲ್ಲಿ ಕೊನೆಯ ಬಾರಿಗೆ ಸಂಸದರ ಪಿಂಚಣಿ, ವೇತನ ಹೆಚ್ಚಿಸಲಾಗಿತ್ತು. 2018 ರ ತಿದ್ದುಪಡಿ ಪ್ರಕಾರ ಸಂಸದರು ತಮ್ಮ ಕಚೇರಿ ವೆಚ್ಚಕ್ಕಾಗಿ 60,000 ರೂ., ಜನರನ್ನು ಭೇಟಿ ಮಾಡಲು 70,000 ರೂ., ಸಂಸತ್ತಿನ ಅಧಿವೇಶನ ಸಂದರ್ಭದಲ್ಲಿ ದಿನಕ್ಕೆ 2,000 ರೂ. ಭತ್ಯೆ ಪಡೆಯುತ್ತಾರೆ. ಈಗ ಈ ಭತ್ಯೆಗಳೂ ಹೆಚ್ಚಾಗಲಿದೆ.

ಇದಲ್ಲದೆ ಸಂಸದರಿಗೆ ತಮ್ಮ ಕುಟುಂಬದವರ ಜೊತೆಗೆ ವರ್ಷಕ್ಕೆ 34 ಬಾರಿ ಉಚಿತವಾಗಿ ವಿಮಾನ ಯಾನ ಮಾಡಲು, ಫೋನ್, ಇಂಟರ್ನೆಟ್ ಬಳಕೆಗೆ ಭತ್ಯೆ, ರೈಲಿನಲ್ಲಿ ಫಸ್ಟ್ ಕ್ಲಾಸ್ ಭೋಗಿಯಲ್ಲಿ ಉಚಿತ ಪ್ರಯಾಣ, ವರ್ಷಕ್ಕೆ 50 ಸಾವಿರ ಯೂನಿಟ್, 4 ಸಾವಿರ ಲೀಟರ್ ಉಚಿತ ನೀರು ಪಡೆಯುತ್ತಾರೆ. ಇದಲ್ಲದೆ 5 ವರ್ಷಗಳ ಕಾಲಾವಧಿಗೆ ಬಾಡಿಗೆ ರಹಿತವಾಗಿ ಮನೆ ಸಿಗುತ್ತದೆ. ಮನೆ ಪಡೆಯದವರಿಗೆ ಅದರ ಭತ್ಯೆ ನೀಡಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Joe Biden: ಅಮೆರಿಕಾ ಮಾಜಿ ಅಧ್ಯಕ್ಷ ಜೋ ಬೈಡನ್ ಗೆ ಕ್ಯಾನ್ಸರ್

Dharmasthala: ಪಂಜಾಬ್ ನಲ್ಲಿ ಧರ್ಮಸ್ಥಳ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್: ಕಾರಣ ಬಹಿರಂಗ

Bengaluru Rains: ಪಾಕಿಸ್ತಾನ ಹೇಳಿದ್ದು ನಿಜವಾಯ್ತು ಬೆಂಗಳೂರಲ್ಲಿ ಬಂದರು ಮಾಡಬಹುದು

ಗಾಜಾದ ಮೇಲೆ ಮುಗಿಯದ ಇಸ್ರೇಲ್‌ ಟಾರ್ಗೆಟ್‌, ದಾಳಿಗೆ 64 ಪ್ಯಾಲೆಸ್ತೀನಿಯರು ಸಾವು

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್‌: ಹರಿಯಾಣ ಪ್ರೊಪ್ರೆಸರ್ ಅರೆಸ್ಟ್‌

ಮುಂದಿನ ಸುದ್ದಿ
Show comments