Publish Date: Sun, 26 Jul 2020 (18:31 IST)
Updated Date: Sun, 26 Jul 2020 (18:33 IST)
ಕೊರೊನಾ ವೈರಸ್ ಅಟ್ಟಹಾಸದ ನಡುವೆ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ವೈರಸ್ ಬಗ್ಗೆ ನಿರ್ಲಕ್ಷ್ಯ ಹಾಗೂ ಅಜಾಗರೂಕತೆ ಬೆಳೆಸಿಕೊಳ್ಳಬಾರದು. ಕಡ್ಡಾಯ ಮಾಸ್ಕ್ ಧರಿಸಲೇಬೇಕು. ಎಲ್ಲರೂ ಸದಾ ಎಚ್ಚರಿಕೆ ವಹಿಸುವ ಮೂಲಕ ಕೊರೊನಾ ತಡೆಯೋಣ ಎಂದಿದ್ದಾರೆ.
ಆಯುರ್ವೇದ ಔಷಧ ತೆಗೆದುಕೊಂಡು ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಗೆ ಗಮನ ಕೊಡಬೇಕು ಎಂದಿದ್ದಾರೆ.
ಸ್ವಾತಂತ್ರ್ಯೋತ್ಸವ ದಿನ ಯುವಕರು, ಜನತೆ ಕೊರೊನಾ ವೈರಸ್ ನಿಂದ ಸ್ವಾತಂತ್ರ್ಯ ಪಡೆಯುವ ಸಂಕಲ್ಪ ಮಾಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.