Publish Date: Wed, 05 Aug 2026 (11:48 IST)
Updated Date: Wed, 05 Aug 2026 (11:52 IST)
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ತೀವ್ರ ಆಘಾತವನ್ನುಂಟು ಮಾಡಿದ್ದು, ಸಾರ್ವಜನಿಕರ ಮಾನವೀಯತೆಯನ್ನೇ ಪ್ರಶ್ನೆ ಮಾಡುವಂತಿದೆ. ಚಲಿಸುವ ರೈಲನ್ನು ಹತ್ತಲು ಯತ್ನಿಸಿದ ಯುವಕನೊಬ್ಬ ಆಯತಪ್ಪಿ ಜಾರಿ ಬಿದ್ದು, ರೈಲಿನಲ್ಲೇ ನೇತಾಡುತ್ತಾ ದಾರುಣವಾಗಿ ಜೀವ ಕಳೆದುಕೊಂಡ ಭೀಕರ ದೃಶ್ಯಾವಳಿಗಳು ಸೆರೆಯಾಗಿವೆ.
ರೈಲು ಹತ್ತಲು ಯತ್ನಿಸಿದಾಗ ಅವಘಡ: ವೇಗವಾಗಿ ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ ಯುವಕನ ಕಾಲು ಜಾರಿ, ಆತ ಗೇಟ್ನ ಕಂಬಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣಭಯದಿಂದ ತೂಗಾಡಲು ಪ್ರಾರಂಭಿಸಿದ್ದಾನೆ.
ಸಹಾಯಕ್ಕಾಗಿ ಜೀವಭಯದ ಕಿರುಚಾಟ: ಆ ಯುವಕ ತನ್ನ ಪ್ರಾಣ ಉಳಿಸಿಕೊಳ್ಳಲು ಅರಚುತ್ತಾ, ಸಹಾಯಕ್ಕಾಗಿ ಕಣ್ಣೀರಿಡುತ್ತಿದ್ದರೂ ರೈಲಿನ ಬಾಗಿಲಲ್ಲಿದ್ದ ಸವಾರರು ಯಾರೂ ಆತನಿಗೆ ಕೈ ಕೊಟ್ಟು ಎಳೆಯಲು ಮುಂದಾಗಲಿಲ್ಲ.
ಕ್ಯಾಮೆರಾದಲ್ಲಿ ದೃಶ್ಯ ಸೆರೆಹಿಡಿದ ಪ್ರಯಾಣಿಕರು: ಇಬ್ಬದಿ ಹಾಗೂ ಒಳಭಾಗದಲ್ಲಿದ್ದ ಜನರು ತಕ್ಷಣವೇ ರೈಲಿನ ಆಪರ್ಜನ್ಸಿ ಚೈನ್ ಎಳೆದು ರೈಲು ನಿಲ್ಲಿಸುವ ಬದಲು, ತಮ್ಮ ಮೊಬೈಲ್ಗಳಲ್ಲಿ ಈ ಭೀಕರ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಸತತವಾಗಿ ಹೋರಾಡಿದರೂ ಪ್ಲಾಟ್ಫಾರ್ಮ್ ಹಾಗೂ ಕಂಬಗಳಿಗೆ ಸಿಲುಕಿ ಆತ ರೈಲಿನ ಅಡಿಗೆ ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ಈ ವೈರಲ್ ವಿಡಿಯೋ ನೋಡಿದ ಸಾರ್ವಜನಿಕರು ಹಾಗೂ ನೆಟ್ಟಿಗರು ತೀವ್ರ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ವ್ಯಕ್ತಿ ಬದುಕಿಗಾಗಿ ಹೋರಾಡುತ್ತಾ ಕಣ್ಣೆದುರೇ ಪ್ರಾಣ ಬಿಡುತ್ತಿದ್ದರೂ, ಸಹಾಯ ಮಾಡುವ ಬದಲು ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಚಿತ್ರೀಕರಿಸುವುದು ಮನುಷ್ಯತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ