Webdunia - Bharat's app for daily news and videos

Install App

ಪ್ರತೀಕಾರ: ಪತ್ನಿ ಸಮ್ಮುಖದಲ್ಲಿ ತಲೆ ಕತ್ತರಿಸಿ ರಸ್ತೆಗೆಸೆದರು

Webdunia
ಬುಧವಾರ, 17 ಆಗಸ್ಟ್ 2016 (13:49 IST)
ಸ್ವಂತ ಅಳಿಯನನ್ನು ಕೊಂದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಬರ್ಬರವಾಗಿ ಕೊಲೆ ಮಾಡಿದ ಹೇಯ ಘಟನೆ ಮಧುರೈನಲ್ಲಿ ನಡೆದಿದೆ. ಈ ಬೀಭತ್ಸ ದೃಶ್ಯವನ್ನು ಅಲ್ಲಿ ನೆರೆದ ಹಲವರು ವೀಕ್ಷಿಸಿದ್ದಾರೆ.
 
ಮೃತನನ್ನು ಅಲಗುರಾಜಾ ಎಂದು ಗುರುತಿಸಲಾಗಿದ್ದು ಮಧುರೈನ ನಿಲಕೊಟ್ಟೈ ನಿವಾಸಿಯಾಗಿರುವ ಈತ ಹಂದಿಮರಿಗಳನ್ನು ಸಾಕಿ, ಅದನ್ನು ಮಾರಿ ಜೀವನ ನಡೆಸುತ್ತಿದ್ದ. ಸಂಬಂಧಿಕನೊಬ್ಬನ ಅಂತ್ಯ ಸಂಸ್ಕಾರಕ್ಕೆ ಆಗಸ್ಟ್ 14 ರಂದು ಪತ್ನಿ ಜತೆ ತಿರುಮಂಗಲಮ್‌ಗೆ ಹೋಗಿದ್ದ ಆತ ಅಲ್ಲಿಂದ ಮರಳುವಾಗ ಅಂಗಡಿಯೊಂದಕ್ಕೆ ಹೊಕ್ಕಿದ್ದಾನೆ. ಆಗ ಮೋಟಾರ್‌ಬೈಕ್‌ಲ್ಲಿ ಅಲ್ಲಿಗೆ ಬಂದ ನಾಲ್ವರು ಆತನ ಮೇಲೆ ಏಕಾಏಕಿ ದಾಳಿ ನಡೆಸಿ ಪತ್ನಿಯ ಮುಂದೆಯೇ ತಲೆ ಕತ್ತರಿಸಿ ರಸ್ತೆಗೆಸೆದಿದ್ದಾರೆ. 
 
ಕೊಲೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ನಾಗೇಶ್ ವ್ಯಾಪಾರದಲ್ಲಿ ಅಲಗುರಾಜನ ಪ್ರತಿಸ್ಪರ್ಧಿಯಾಗಿದ್ದ. ಆತನ ಅಳಿಯ ಕಳೆದ ಕೆಲ ವಾರದ ಹಿಂದೆ ಹತ್ಯೆಯಾಗಿದ್ದು, ಈ ಕೃತ್ಯದಲ್ಲಿ ಅಲಗುರಾಜನ ಪಾತ್ರವಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತೀಕಾರವಾಗಿ ಹತ್ಯೆಗೈಯ್ಯಲಾಗಿದೆ. ದಾಳಿಕೋರರಲ್ಲಿ ಮೃತನ ಸಂಬಂಧಿ ಕೂಡ ಇದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 
 
ಮೃತನ ಪತ್ನಿ ಥೇನುಗೂ ಸಣ್ಣಪುಟ್ಟ ಗಾಯಗಳಾಗಿದ್ದು, ನಾಗೇಶನ ಅಳಿಯನ ಕೊಲೆಗೆ ಸಂಬಂಧಿಸಿದಂತೆ  ಪತಿಯನ್ನು ಮತ್ತು ಇತರ ನಾಲ್ವರನ್ನು ಶಂಕೆಯ ಮೇಲೆ ಬಂಧಿಸಲಾಗಿತ್ತು. ಬಳಿಕ ನನ್ನ ಪತಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ನನ್ನ ಪತಿಯೇ ಕೊಲೆಗೈದಿದ್ದಾನೆ ಎಂದು ಬಗೆದು ಈ ಕೃತ್ಯವನ್ನೆಸಗಲಾಗಿದೆ ಎಂದಾಕೆ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments