Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹೈದರಾಬಾದ್ : ದೇಶದ ಗಮನ ಸೆಳೆದಿದ್ದ ತೆಲಂಗಾಣದ ಮುನುಗೋಡೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಟಿಆರ್ಎಸ್ ಜಯ ಸಾಧಿಸಿದೆ.
10,040 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಪ್ರತಿಷ್ಠೆಯ ಕದನದಲ್ಲಿ ಸಿಎಂ ಕೆಸಿಆರ್ ಗೆದ್ದು ಬೀಗಿದ್ದಾರೆ.
ಟಿಆರ್ಎಸ್ ಅಭ್ಯರ್ಥಿ ಕೆ ಪ್ರಭಾಕರ ರೆಡ್ಡಿ 97,334 ಮತಗಳನ್ನು ಪಡೆದರೆ ಬಿಜೆಪಿಯ ರಾಜಗೋಪಾಲ ರೆಡ್ಡಿ 86,275 ಮತಗಳನ್ನು ಪಡೆದಿದ್ದಾರೆ.