Webdunia - Bharat's app for daily news and videos

Install App

ಮದುವೆ ನಿರಾಕರಣೆ: ಯುವತಿಗೆ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಯುವಕ

Webdunia
ಸೋಮವಾರ, 29 ಆಗಸ್ಟ್ 2016 (13:39 IST)
ತನ್ನ ಮದುವೆ ಪ್ರಪೋಸಲ್ ನಿರಾಕರಿಸಿದ 25 ವರ್ಷದ ಯುವತಿಯ ಮೈಗೆ ಯುವಕನೊಬ್ಬ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ವಾಯವ್ಯ ದೆಹಲಿಯ ಬಾಲ್ಸ್‌ವಾ ಡೇರಿ ಪ್ರದೇಶದಲ್ಲಿ ಸಂಭವಿಸಿದೆ. ಆರೋಪಿ ಅಭಿಷೇಕ್ ತನ್ನ ಸ್ನೇಹಿತರಾದ ವಿಜಯ್, ಕರಣ್ ಮತ್ತಿತರರ ಜತೆ ಸೇರಿಕೊಂಡು ಸಂತ್ರಸ್ತೆಯ ಮನೆಗೆ ತೆರಳಿ ಯುವತಿಯ ಬಂಧುಗಳನ್ನು ರಾಡ್‌ಗಳಿಂದ ಥಳಿಸಲಾರಂಭಿಸಿದರು.
 
ಅಭಿಶೇಕ್‌ನ ನಾಲ್ಕೈದು ಚಿಕ್ಕಪ್ಪಂದಿರು ಮತ್ತು ಸ್ನೇಹಿತರು ಜತೆಗೂಡಿದ್ದರು. ಯುವತಿಗೆ ಅಭಿಷೇಕ್‌ ಪುನಃ ಮದುವೆಯಾಗುವಂತೆ ಒತ್ತಾಯಿಸಿದ. ಆದರೆ ಯುವತಿ ನಿರಾಕರಿಸಿದ ಕೂಡಲೇ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಬಳಿಕ ಎಲ್ಲರೂ ಕಾಲುಕಿತ್ತರು ಎಂದು ಸಂತ್ರಸ್ತೆಯ ಬಂಧು ಗೀತಾ ಹೇಳಿದ್ದಾರೆ.
 
 ಗೀತಾ ನಡೆದ ವಿದ್ಯಮಾನವನ್ನು ವಿವರಿಸುತ್ತಾ, ಯುವತಿ ಹೊರಗೆ ಹೋದಲ್ಲೆಲ್ಲ ಅಭಿಷೇಕ್ ಮತ್ತಿತರ ಯುವಕರು ಅವಳಿಗೆ ಕಿರುಕುಳ ನೀಡಲಾರಂಭಿಸಿದ್ದರು. ಅಭಿಷೇಕ ಯುವತಿಗೆ ಬೆದರಿಕೆ ಹಾಕುತ್ತಾ, ಅವಳು ತನ್ನನ್ನು ಮದುವೆಯಾಗದಿದ್ದರೆ ಬೇರೊಬ್ಬರ ಸ್ವತ್ತಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದ. ಕಳೆದ ಏಳೆಂಟು ದಿನಗಳಿಂದ ಕಿರುಕುಳ ನೀಡುತ್ತಿದ್ದರಿಂದ ಸಹಿಸದ ಯುವತಿ ಸೋದರನಿಗೆ ವಿಷಯ ಮುಟ್ಟಿಸಿದ್ದರಿಂದ ಸೋದರ ಯುವತಿಯಿಂದ ದೂರಉಳಿಯುವಂತೆ ಯುವಕರಿಗೆ ಎಚ್ಚರಿಸಿದ್ದರು.

ಕೆಲವು ದಿನಗಳ ನಂತರ ಮತ್ತೆ ಕಿರುಕುಳ ಷುರುವಾಯಿತು ಎಂದು ವಿವರಿಸಿದ್ದಾಳೆ. ಯುವತಿಯ ಮೈಗೆ ಬೆಂಕಿಹಚ್ಚಿದ್ದರಿಂದ ಅವಳ ದೇಹ ಶೇ. 95ರಷ್ಟು ಸುಟ್ಟಿದ್ದು ಬದುಕುಳಿಯುವ ಆಸೆ ನಶಿಸಿದೆ ಎಂದು ಗೀತಾ ಹೇಳಿದರು.
 
 ಈಗ ಸೋದರ ಮತ್ತು ಸೋದರಿ ಇಬ್ಬರೂ ತೀವ್ರ ನೋವನ್ನು ಅನುಭವಿಸಿದ್ದಾರೆ. ಆರೋಪಿಗಳು  ಕೂಡ ಮುಂದೆಂದೂ ಇಂತಹ ಕೃತ್ಯವೆಸಗದಂತೆ  ಶಿಕ್ಷೆ ವಿಧಿಸಬೇಕು ಎಂದು ಗೀತಾ ಮನವಿ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾಜಾದ ಮೇಲೆ ಮುಗಿಯದ ಇಸ್ರೇಲ್‌ ಟಾರ್ಗೆಟ್‌, ದಾಳಿಗೆ 64 ಪ್ಯಾಲೆಸ್ತೀನಿಯರು ಸಾವು

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್‌: ಹರಿಯಾಣ ಪ್ರೊಪ್ರೆಸರ್ ಅರೆಸ್ಟ್‌

ಪಾಕಿಸ್ತಾನಕ್ಕೆ ಬೇಹುಗಾರಿಕೆ: ನಮ್ಮವರೇ ಹೀಗೇ ಮಾಡಿದ್ರೆ ಏನ್‌ ಮಾಡೋದು

ಪಾಕ್‌ನಲ್ಲಿ ತೀವ್ರವಾದ ಆಹಾರ ಅಭದ್ರತೆ: 11ಮಿಲಿಯನ್ ಜನರ ಮೇಲೆ ಪರಿಣಾಮ ಸಾಧ್ಯತೆ

ದೇವೇಗೌಡರಿಗೆ 92ನೇ ಜನ್ಮದಿನದ ಸಂಭ್ರಮ: ಮೋದಿ, ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

ಮುಂದಿನ ಸುದ್ದಿ
Show comments