Webdunia - Bharat's app for daily news and videos

Install App

ಮನೆ ಖಾಲಿ ಮಾಡಿದ್ರು ಗೃಹಜ್ಯೋತಿ ಬಳಸಬಹುದು ಹೇಗೆ ಗೊತ್ತಾ..?

geetha
ಗುರುವಾರ, 8 ಫೆಬ್ರವರಿ 2024 (19:09 IST)
ಬೆಂಗಳೂರು-ರಾಜ್ಯ ಸರ್ಕಾರವು ಸೇವಾ ಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ 'ಡಿಲಿಂಕಿಂಗ್' ಆಯ್ಕೆಗೆ ಈಗ ಅವಕಾಶ ನೀಡಿದೆ.ಯೋಜನೆಯಿಂದ ಆಧಾರ್ ಸಂಖ್ಯೆಯನ್ನು ಡಿಲಿಂಕ್ ಮಾಡಲು ಮತ್ತು ಹೊಸ ಮನೆಗಳಿಗೆ ಗೃಹ ಜ್ಯೋತಿಯ ಪ್ರಯೋಜನವನ್ನು ಪಡೆಯಲು ಯಾವುದೇ ಆಯ್ಕೆಯಿಲ್ಲದ ಕಾರಣ ಕರ್ನಾಟಕದಾದ್ಯಂತ ಬಾಡಿಗೆದಾರರು ಒಂದು ಮನೆಗೆ ಅವರೇ ಎಂಬಂತೆ ಫಿಕ್ಸ್ ಆದಂತೆ ಆಗಿತ್ತು.
 
ಬೇರೆಯವರು ಮನೆಯಲ್ಲಿದ್ದರೂ ಇನ್ನೊಬ್ಬರು ಬಾಡಿಗೆದಾರರು ಎಂಬಂತೆ ಸೂಚಿಸುತ್ತಿತ್ತು. ಸಮಸ್ಯೆ ಮತ್ತು ಗೊಂದಲದ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜನವರಿ 18, 2024 ರ ಆವೃತ್ತಿಯಲ್ಲಿ 'ನಿಮ್ಮ ಮನೆಯನ್ನು ಬದಲಾಯಿಸುವುದೇ? ಗೃಹ ಜ್ಯೋತಿ ಮರು-ನೋಂದಣಿ ಸಂಕಟ' ಎಂದು ವರದಿಯನ್ನು ಮಾಡಿತ್ತು. ಹಾಗೆಯೇ ಹಲವಾರು ಮಾಧ್ಯಮಗಳು ವರದಿಯನ್ನು ಮಾಡಿತ್ತು.ಉಚಿತ ವಿದ್ಯುತ್ ಯೋಜನೆ ಗೃಹ ಜ್ಯೋತಿ ನಿಯಮ ಬದಲಾಯಿಸಿದ ಕರ್ನಾಟಕ ಸರ್ಕಾರಈಗ ಮಾಧ್ಯಮಗಳ ವರದಿಯನ್ನು ಗಮನಿಸಿರುವ ಬೆಸ್ಕಾಂ ಬಾಡಿಗೆದಾರರು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಮ್‌ಗಳು) ನ್ಯಾಯವ್ಯಾಪ್ತಿಯ ವಿಭಾಗೀಯ ಕಚೇರಿಗಳಿಗೆ ಭೇಟಿ ನೀಡುವಂತೆ ಸೂಚಿಸಿದೆ.

ಅವರ ಗೃಹ ಜ್ಯೋತಿ ಸಂಪರ್ಕಗಳಿಂದ ತಮ್ಮ ಆಧಾರ್ ಸಂಖ್ಯೆಯನ್ನು ತಾವೇ ಡಿಲಿಂಕ್ ಮಾಡುವ ಆಯ್ಕೆಯನ್ನು ನೀಡಿದೆ. ಆದರೆ ಈ ಕ್ರಮವು ವಿಭಾಗೀಯ ಕಚೇರಿಗಳಲ್ಲಿ ಅವ್ಯವಸ್ಥೆಗೆ ಮತ್ತಷ್ಟು ದಾರಿ ಮಾಮಾಡಲಾಗುತ್ತಿದೆ.ಆನ್‌ಲೈನ್ ವಿಧಾನಗಳ ಮೂಲಕ ಗ್ರಾಹಕರನ್ನು ಡಿಲಿಂಕ್ ಮಾಡಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಇಲಾಖೆ ಎಲ್ಲಾ ಎಸ್ಕಾಮ್‌ಗಳನ್ನು ತಿಳಿಸಿದೆ.ಈ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠವಾಗಿ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಅನ್ನು ನೀಡಲಾಗುತ್ತದೆ. ಸರಾಸರಿ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಮಾಸಿಕವಾಗಿ 500ರಿಂದ 1200 ರೂಪಾಯಿ ವಿದ್ಯುತ್ ಬಿಲ್ ಬರುವವರಿಗೆ ಇದು ಲಾಭವಾಗಲಿದೆ. ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಮಂಗಳೂರುಒನ್, ವಿದ್ಯುತ್ ಇಲಾಖೆ ಕಚೇರಿಗಳಲ್ಲಿ ಕೂಡ ಅರ್ಜಿಯನ್ನು ನೋಂದಣಿ ಮಾಡಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DK Shivakumar: ನೀವು ಮನೆ ಸರಿಯಾಗಿ ಕಟ್ಟಿಕೊಳ್ಬೇಕು, ಆಗ ನೀರು ಬರಲ್ಲ: ಡಿಕೆ ಶಿವಕುಮಾರ್

Bengaluru Rains: ಬೆಳಿಗ್ಗೆಯಿಂದಲೇ ಶುರು ಮಳೆ, ಕಚೇರಿಗೆ ಹೋಗುವವರು ಗಮನಿಸಿ

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂದಿಲ್ಲ ಎಂದ ಡಿಕೆಶಿ: ಪ್ರತೀ ತಿಂಗಳು ಅಂದ್ರೆ ಏನರ್ಥ

Karnataka Weather: ಬೆಂಗಳೂರಿಗೆ ಇನ್ನೆಷ್ಟು ದಿನ ಮಳೆ, ಯಾವ ಜಿಲ್ಲೆಗೆ ಏನು ಅಲರ್ಟ್ ಇಲ್ಲಿದೆ ವಿವರ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಮುಂದಿನ ಸುದ್ದಿ
Show comments