Webdunia - Bharat's app for daily news and videos

Install App

ಹಜ್ ಯಾತ್ರೆಗೆ ನಮಗೆ ದುಡ್ಡೇ ಕೊಡ್ತಿಲ್ಲಾರೀ.. ಜಮೀರ್ ಅಹ್ಮದ್ ಸ್ಪಷ್ಟನೆ

Krishnaveni K
ಬುಧವಾರ, 29 ಜನವರಿ 2025 (15:08 IST)
ಬೆಂಗಳೂರು: ಹಜ್ ಯಾತ್ರೆಗೆ ನಮಗೆ ಯಾವ ಸರ್ಕಾರನೂ ಸಬ್ಸಿಡಿ ಕೊಡಲ್ಲ. ಸಿಟಿ ರವಿ ಅವರು ತಿಳ್ಕೊಂಡು ಮಾತನಾಡಲಿ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಬಿಜೆಪಿ ಎಂಎಲ್ ಸಿ ಸಿಟಿ ರವಿಯವರು, ಹಜ್ ಯಾತ್ರೆ ಮಾಡುವವರಿಗೆ ಸರ್ಕಾರ ನೀಡುವ ಸಬ್ಸಿಡಿ ಕಡಿತ ಮಾಡಲಿ ಎಂದು ಆಗ್ರಹಿಸಿದ್ದರು. ಇದರ ಬಗ್ಗೆ ಇಂದು ಮಾಧ್ಯಮಗಳು ಸಚಿವ ಜಮೀರ್ ಅಹ್ಮದ್ ಅವರ ಪ್ರತಿಕ್ರಿಯೆ ಕೇಳಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಕೇಂದ್ರ ಸರ್ಕಾರ ಆಗಲೀ, ರಾಜ್ಯ ಸರ್ಕಾರ ಆಗಲೀ ಹಜ್ ಯಾತ್ರೆಗೆ ಸಬ್ಸಿಡಿ ನೀಡಿಲ್ಲ. ಸಿಟಿ ರವಿಯವರು ಮಂತ್ರಿಯಾಗಿದ್ದವರು. ಮಾತನಾಡುವ ಮೊದಲು ತಿಳ್ಕೊಂಡು ಮಾತನಾಡಲಿ. ಸುಮ್ನೇ ಅಲ್ಪ ಸಂಖ್ಯಾತರ ವಿಚಾರ ಎಂದ ತಕ್ಷಣ ಮಾತನಾಡುವುದಲ್ಲ’ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

‘ಕೇಂದ್ರ ಸರ್ಕಾರದವರು ನಮಗೆ ಪ್ರತಿ ವರ್ಷಕ್ಕೆ ಇಷ್ಟು ಜನರು ಅಂತ ಟಾರ್ಗೆಟ್ ಕೊಡ್ತಾರೆ. ಕಳೆದ ವರ್ಷ 12 ಸಾವಿರ ಮಂದಿಗೆ ಟಾರ್ಗೆಟ್ ಕೊಟ್ಟಿದ್ದರು. ಈ ವರ್ಷ 10 ಸಾವಿರ ಜನರಿಗೆ ಕೊಟ್ಟಿದ್ದಾರೆ. ಯಾವ ರಾಜ್ಯದವರಿಗೂ ಸಬ್ಸಿಡಿ ಕೊಡಲ್ಲ. ಬೇಕಿದ್ರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿ ತಿಳ್ಕೊಳ್ಳಲಿ. ಕೇಂದ್ರ, ರಾಜ್ಯ ಸರ್ಕಾರದವರು ಹಜ್ ಯಾತ್ರೆ ಮಾಡುವವರಿಗೆ ಒಂದು ಕಡೆ ಕ್ಯಾಂಪ್ ಹಾಕಿ ಕೂರಿಸಿ ಅಲ್ಲಿಂದ ಇಮಿಗ್ರೇಷನ್, ವೀಸಾ ಇತ್ಯಾದಿ ಕಾನೂನು ಪ್ರಕ್ರಿಯೆ ಮಾಡಿಕೊಡುತ್ತದೆ ಅಷ್ಟೇ. ದುಡ್ಡು-ಗಿಡ್ಡು ಏನೂ ಕೊಡಲ್ಲ’ ಎಂದು ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಆತಂಕ

Mamata Banerjee:ಪಾಕಿಸ್ತಾನ ವಿರುದ್ಧ ವಿಶ್ವಕ್ಕೆ ಮನವರಿಕೆ ಮಾಡಲು ನಮ್ಮ ಸಂಸದರನ್ನು ಕಳಿಸಲ್ಲ ಎಂದ ಮಮತಾ ಬ್ಯಾನರ್ಜಿ

Pakistan: ಉಗ್ರ ಸೈಫುಲ್ಲಾ ಮೃತದೇಹಕ್ಕೆ ರಾಷ್ಟ್ರಧ್ವಜ: ಪಾಕಿಸ್ತಾನದ ನಾಟಕ ಬಯಲು

India Pakistan: ಭಾರತದ ವಿರುದ್ಧ ಸೋತು ಸುಣ್ಣವಾದ ಬಳಿಕ ಚೀನಾ ಬಳಿ ಓಡಿದ ಪಾಕಿಸ್ತಾನ

ಮುಂದಿನ ಸುದ್ದಿ
Show comments