Publish Date: Mon, 03 Jul 2023 (19:30 IST)
Updated Date: Mon, 03 Jul 2023 (19:32 IST)
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೊಸದಾಗಿ ವೈಎಸ್ಟಿ ತೆರಿಗೆ ಆರಂಭವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ MLC ಚಲವಾದಿ ನಾರಾಯಣ ಸ್ವಾಮಿ ಧ್ವನಿಗೂಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇಶದಲ್ಲಿ GST ಟ್ಯಾಕ್ಸ್ ಇರೋದು ಗೊತ್ತು. ಆದರೆ ಇತ್ತೀಚೆಗೆ ರಾಜ್ಯದಲ್ಲಿ ವೈಎಸ್ಟಿ ತೆರಿಗೆಯೂ ಕೂಡಾ ಇದೆ.. ವೈಎಸ್ಟಿ ಅಂದ್ರೆ ಯತೀಂದ್ರ, ಸಿದ್ದರಾಮಯ್ಯ ಟ್ಯಾಕ್ಸ್ ಅಂತಾ ಎಲ್ರೂ ಮಾತಾಡ್ತಾ ಇದ್ದಾರೆ.. ಬಹುಶಃ ಅದು ಇರಬಹುದು, ಆದರೆ ಪರ್ಸೆಂಟೇಜ್ ಎಷ್ಟು ಇದೆ ಅಂತಾ ನನಗೂ ಗೊತ್ತಿಲ್ಲ.. ಇದರ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದು ತಿರುಗೇಟು ನೀಡಿದ್ದಾರೆ.