Webdunia - Bharat's app for daily news and videos

Install App

ಯಡಿಯೂರಪ್ಪಗೆ ಅಧಿಕಾರ ತಪ್ಪಿಸಲು ಭಾರೀ ಸ್ಕೆಚ್?

Webdunia
ಸೋಮವಾರ, 20 ಮೇ 2019 (13:34 IST)
ರಾಜ್ಯ ಬಿಜೆಪಿಯಲ್ಲಿ ಲೋಕಸಭೆ ಚುನಾವಣೆ ಸಮೀಕ್ಷೆ ಬಿಡುಗಡೆ ಬೆನ್ನಲ್ಲೇ‌ ಮತ್ತೆ ಕಿತ್ತಾಟ ಕಾಣಿಸಿಕೊಂಡಿದೆ.

ಬಿ.ಎಸ್.ಯಡಿಯೂರಪ್ಪಗೆ ಅಧಿಕಾರ ತಪ್ಪಿಸಲು ತೆರೆಮರೆಯಲ್ಲೇ‌ ನಡೆಯುತ್ತಿದೆ ಸ್ಕೆಚ್? ಎನ್ನುವ ಅನುಮಾನ ವ್ಯಕ್ತವಾಗತೊಡಗಿದೆ.

ಒಂದು‌ ಕಡೆ ರಾಜ್ಯದಲ್ಲಿ ಅಧಿಕಾರಕ್ಕೆ ಬಿಜೆಪಿ ಕಚೇರಿಯಲ್ಲಿ ಸುದರ್ಶನ ಹೋಮ ನಡೆಯುತ್ತಿದ್ದರೆ, ಮತ್ತೊಂದೆ ಚುರುಕು ಪಡೆದ ಭಿನ್ನಮತ ಚಟುವಟಿಕೆ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.

ಈ ಬಾರಿ ಭಿನ್ನಮತ ಚಟುವಟಿಕೆಗೆ ಅಖಾಡಕ್ಕೆ ಇಳಿದವರು ಯಾರು? ಅನ್ನೋ ಕುತೂಹಲ ಮೂಡಿದೆ. ಒಂಟಿಯಾದ ಆ ನಾಯಕರಿಂದ ಪರ್ಯಾಯ ನಾಯಕರ ಸೃಷ್ಟಿಗೆ ತಯಾರಿ ನಡೆಯುತ್ತಿದೆಯಂತೆ.

ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅಖಾಡಕ್ಕೆ ಧುಮುಕಿದ್ದಾರೆ ಎನ್ನಲಾಗಿದೆ. ಚುನಾವಣೆ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಲಭ್ಯವಾಗಲಿದೆ. ಇದರಿಂದ‌ ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಇದರಿಂದ ಕರ್ನಾಟಕ ರಾಜ್ಯ ಸರ್ಕಾರದ ಮೇಲೂ ಪರಿಣಾಮ ಬೀರಲಿದೆ.

ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದ್ರೆ ಬಿಜೆಪಿ ಸರ್ಕಾರ ನಿಶ್ಚಿತವಾಗಿ ರಚನೆ ಆಗುತ್ತದೆ. ಆಗ ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ. ಹೀಗಾಗಿ ಯಡಿಯೂರಪ್ಪಗೆ ಅಧಿಕಾರ ತಪ್ಪಿಸಲು ಮತ್ತೆ ನಡೆಯುತ್ತಿದೆಯಾ ತಯಾರಿ? ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ. ತೆರೆ ಮರೆಯಲ್ಲಿ ಇದ್ದ ಯಡಿಯೂರಪ್ಪ ಬಿ.ಎಲ್. ಸಂತೋಷ್ ಮುಸುಕಿನ ಗುದ್ದಾಟ ಹೊರಗೆ ಕಾಣಿಸಲಾರಂಭಿಸಿದೆ. ಈಗ 40 ಪ್ರಮುಖ ನಾಯಕರನ್ನ ಕರೆದುಕೊಂಡು ಅಂಡಮಾನ್ ಗೆ ಹಾರಿದ್ದಾರೆ ಬಿ.ಎಲ್. ಸಂತೋಷ್.

ಸಿ.ಟಿ.ರವಿ, ನಿರ್ಮಲ್ ಕುಮಾರ್ ಸುರಾನಾ, ಭಾನುಪ್ರಕಾಶ್ ಜೊತೆಗೆ ಎಲ್ಲ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಅಂಡಮಾನ್‌ಗೆ ತೆರಳಿದ್ದಾರೆ.

ಅಷ್ಟೊಂದು ‌ಪ್ರಮಾಣದ ನಾಯಕರನ್ನ ಅಂಡಮಾನ್‌ಗೆ ಕರೆದೊಯ್ದ ಹಿಂದಿದೆಯಾ ಬಹುದೊಡ್ಡ ಹುನ್ನಾರ? ಎನ್ನುವ ಚರ್ಚೆ ಶುರುವಾಗಿದೆ. ಯಡಿಯೂರಪ್ಪಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ನಡೆಯುತ್ತಿದೆಯಾ ತಯಾರಿ? ಎನ್ನುವ ಪ್ರಶ್ನೆಯೂ ಕೇಳಿಬರತೊಡಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಪಟ್ಟಿಗೆ ಸೇರಿಸಲು ನಿರಾಕರಿಸಿದ್ದಕ್ಕೆ ಅನ್ಯ ಕೋಮಿನವರಿಂದ ಅಧಿಕಾರಿ ಮೇಲೆ ಹಲ್ಲೆ: ಬಿಜೆಪಿ ಆಕ್ರೋಶ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಎಂತೆಂಥಾ ಕ್ರೇಜಿ ಫ್ರೆಂಡ್ಸ್ ಇರ್ತಾರೆ ಗುರೂ... ಗೆಳೆಯ ಫೋನ್ ಎತ್ತಿಲ್ಲ ಎಂದು ಫ್ರೆಂಡ್ಸ್ ಗ್ಯಾಂಗ್ ಮಾಡಿದ್ದೇನು ನೋಡಿ Video

ಅಯ್ಯೋ ನಿಮ್ಮನ್ನು ನೀವೇ ಮೂರ್ಖ ಅನ್ನೋದು, ನಿಮ್ಮ ಮತದಾರರನ್ನೇ ಈಡಿಯಟ್ ಅನ್ನೋದಾ... ರಾಹುಲ್ ಗಾಂಧಿಗೆ ಬಿಜೆಪಿ ತಿರುಮಂತ್ರ

ಪೆಟ್ರೋಲ್ ಹಾಕಿಸಿ ಓಡೋಗ್ತೀಯಾ...ಖದೀಮ ಕಾರು ಚಾಲಕನಿಗೆ ಬಂಕ್ ಸಿಬ್ಬಂದಿ ಪಾಠ ಕಲಿಸಿದ ರೀತಿ ನೋಡಿ Video

ಮುಂದಿನ ಸುದ್ದಿ
Show comments