Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಾಡಿನಿಂದ ನಾಡಿಗೆ ಬಂದು ಬೆಳೆ ಹಾನಿ ಮಾಡುವ ಕಾಡಾನೆ ಬಗ್ಗೆ ಕೇಳಿರುತ್ತೀರಿ. ಇಲ್ಲೊಂದು ಸಲಗ ರಸ್ತೆ ಮಧ್ಯೆ ಬಂದು ಕಾರಿನ ಮೇಲೆ ತನ್ನ ಸಿಟ್ಟನ್ನು ತೋರಿಸಿದ ಘಟನೆ ಚಾಮರಾಜನಗರ ಗಡಿಯಾದ ತಮಿಳುನಾಡಿನ ಆಸನೂರು ಬಳಿ ನಡೆದಿದೆ. ಕಾಡಾನೆ ತನ್ನ ಮಕ್ಕಳನ್ನು ಕರೆತಂದು ಸಂಪೂರ್ಣ ಪರಿವಾರದೊಂದಿಗೆ ಕಬ್ಬಿನ ಲಾರಿಗಾಗಿ ಕಾಯ್ತ ಇತ್ತು. ಆಗ ಬಂದ ಕಾರಿನ ಮೇಲೆ ಪುಂಡಾನೆ ಕೋಪಗೊಂಡು ಕಾರಿನ ಗಾಜನ್ನು ಪುಡಿ ಮಾಡಿದೆ. ಆನೆ ದಾಳಿಗೆ ಕಾರಿ ಗಾಜು ಪೀಸ್-ಪೀಸ್ ಆಗಿದೆ. ಏಕಾಏಕಿ ಆನೆ ಕಾರಿನ ಮೇಲೆ ದಾಳಿ ಮಾಡಿದ್ದು, ಕಾರಿನಲ್ಲಿದ್ದ ಜನರು ಭಯಭೀತಗೊಂಡಿದ್ದಾರೆ. ಸದ್ಯಕ್ಕೆ ಕಾರಿನಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ.