Publish Date: Fri, 05 Jan 2018 (11:19 IST)
Updated Date: Fri, 05 Jan 2018 (11:28 IST)
ಹಾಸನ : ಮಂಗಳೂರಿನ ಹಿಂದೂಪರ ಸಂಘಟನೆಯ ಕಾರ್ಯಕರ್ತ ದೀಪಕ್ ಹತ್ಯೆ ಪ್ರಕರಣದ ಹಿಂದೆ ಸಚಿವ ರಮಾನಾಥ ರೈ ಅವರ ಕೈವಾಡವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆರೋಪಕ್ಕೆ ಸಿ.ಎಂ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.
‘ದೀಪಕ್ ಹತ್ಯೆ ಪ್ರಕರಣದ ಹಿಂದೆ ಸಚಿವ ರಮಾನಾಥ ರೈ ಅವರ ಕೈವಾಡವಿದೆ ಎಂದಿದ್ದು ಅತ್ಯಂತ ಬೇಜವಾಬ್ದಾರಿ ಹೇಳಿಕೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಕೂಡ ಬಂಧಿಸಲಾಗಿದೆ. ಈ ವೇಳೆ ಸಚಿವರ ವಿರುದ್ಧ ಈ ಹೇಳಿಕೆ ನೀಡುವುದು ಸರಿಯಲ್ಲ. ಪಿ.ಎಫ್.ಐ. ಸೇರಿ ಕೆಲ ಸಂಘಟನೆಗಳ ನಿಷೇಧ ವಿಚಾರಕ್ಕೆ ಮೊದಲು ತನಿಖೆ ಮುಗಿಯಲಿ’ ಎಂದು ಸಿ.ಎಂ ಸಿದ್ದರಾಮಯ್ಯ ಅವರು ಹಾಸನದಲ್ಲಿ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ