Publish Date: Mon, 08 May 2023 (20:29 IST)
Updated Date: Mon, 08 May 2023 (20:32 IST)
ಮೇ 10 ರಂದು ನಡೆಯಲಿರುವ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ, ಮತದಾರರು ತಪ್ಪದೇ ಮತದಾನ ಮಾಡಲು, ಮತದಾನ ಜಾಗೃತಿ ಅಭಿಯಾನವನ್ನು ಯಲಹಂಕ ವಿಭಾಗದ ಮದರ್ ಡೇರಿ ವೃತ್ತದ ದಿಂದ, ವಿಷ್ಣು ಪಾರ್ಕ್ ವೃತ್ತದವರೆಗೆ ಹಮ್ಮಿಕೊಂಡಿದ್ದು, ಸದರಿ ಅಭಿಯಾನಕ್ಕೆ ಯಲಹಂಕ ವಲಯದ ಜಂಟಿ ಆಯುಕ್ತರಾದ ಶ್ರೀಮತಿ.ಪೂರ್ಣಿಮಾ ರವರು ಚಾಲನೆ ನೀಡಿದರು.
ಈ ವೇಳೆ ಯಲಹಂಕ ವಲಯದ ಉಪ ಆಯುಕ್ತರಾದ ಡಾ. ಮಮತಾ, ಪೊಲೀಸ್ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಪಾಲಿಕೆಯ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು, ಲಿಂಕ್ ವರ್ಕರ್ಸ್ ಗಳು, ಸಿ.ಆರ್.ಪಿ ಗಳು ಭಾಗವಹಿಸಿರುತ್ತಾರೆ. ಈ ಸಂದರ್ಭದಲ್ಲಿ ಜ್ಞಾನ ಜ್ಯೋತಿ ಕಾಲೇಜ್ ವಿದ್ಯಾರ್ಥಿಗಳು ಮತ್ತು ಯುವ ಮತದಾರರಿಗೆ ಮತದಾನ ಬಗ್ಗೆ ಅರಿವು ಮೂಡಿಸಲಾಯಿತು ಜೊತೆಗೆ ಎಲ್ಲರೂ ತಪ್ಪದೇ ಮತದಾನ ಮಾಡಲು ಮತದಾನ ಪ್ರತಿಜ್ಞೆ ವಿಧಿ ಬೋಧಿಸಲಾಯಿತು.