ಪ್ರದೀಪ್ ಈಶ್ವರ್ ಚಪ್ಪಲಿ ಎಸೆತ ಪ್ರಕರಣ: ಅವಮಾನವಾಗಿದ್ದರೆ ಮಾನನಷ್ಟ ಮೊಕದ್ದಮೆ ಹಾಗಬೇಕಿತ್ತು ಎಂದ ಜಡ್ಜ್ Video

ಕೃಷ್ಣವೇಣಿ ಕೆ
ಬುಧವಾರ, 8 ಜುಲೈ 2026 (10:51 IST)
ಬೆಂಗಳೂರು: ಪ್ರದೀಪ್ ಈಶ್ವರ್ ವಿರುದ್ಧ ಚಪ್ಪಲಿ ಎಸೆತ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ನಾಗಪ್ರಸನ್ನ ಅವಮಾನವಾಗಿದ್ದರೆ ಮಾನನಷ್ಟ ಮೊಕದ್ದಮೆ ಹಾಕಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಉತ್ಸವದ ವೇಳೆ ಎಚ್ ಡಿ ಕುಮಾರಸ್ವಾಮಿ ಬೆಂಬಲಿಗರು ಮತ್ತು ಪ್ರದೀಪ್ ಈಶ್ವರ್ ನಡುವೆ ಘರ್ಷಣೆ ನಡೆದಿತ್ತು. ತಮ್ಮ ವಿರುದ್ಧ ಘೋಷಣೆ ಕೂಗಿದ ಕುಮಾರಸ್ವಾಮಿ ಬೆಂಬಲಿಗರತ್ತ ಪ್ರದೀಪ್ ಈಶ್ವರ್ ಮೀಸೆ ತಿರುವಿ ಸವಾಲು ಹಾಕಿದ್ದರು. ಇದರ ನಡುವೆ ಕೆಲವರು ಶಾಸಕರತ್ತ ಚಪ್ಪಲಿ ತೂರಿದ್ದರು.

ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನಾಗಪ್ರಸನ್ನ ನಡೆಸಿದ್ದು ನಾಲ್ವರ ವಿರುದ್ಧ ಕೇಸ್ ಗೆ ತಡೆ ನೀಡಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ಏನಾಯ್ತು ಎಂಬುದರ ವಿಡಿಯೋ ಇಲ್ಲಿದೆ.

ಪ್ರದೀಪ್ ಈಶ್ವರ್ ಪರ ವಕೀಲರು ಪ್ರಕರಣದ ವಿವರಣೆ ನೀಡುವಾಗ ಶಾಸಕರನ್ನು ಹುಚ್ಚ, ಅಯೋಗ್ಯ ಎಂದು ಬಳಸುತ್ತಾರೆ ಎಂದಿದ್ದಾರೆ. ಆಗ ಮಧ್ಯಪ್ರವೇಶಿಸಿದ ನ್ಯಾಯಾಧೀಶರು ಮಾನನಷ್ಟ ಮೊಕದ್ದಮೆ ಹಾಕಿದ್ದಾರಾ? ಎಂದು ಕೇಳುತ್ತಾರೆ. ಆಗ ವಕೀಲರು ಇಲ್ಲ ಎನ್ನುತ್ತಾರೆ. ಆಗ ನ್ಯಾಯಾಧೀಶರು ಹಾಗಿದ್ದರೆ 800 ಜನರಲ್ಲಿ ನಾಲ್ಕು ಜನರು ಮಾತ್ರ ಕಂಡರಾ? ಉಳಿದವರ ವಿರುದ್ಧ ಕೇಸ್ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಇದೇ ಕಾರಣಕ್ಕೆ ಈ ನಾಲ್ವರ ವಿರುದ್ಧ ಕೇಸ್ ಗೆ ತಡೆ ನೀಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

 

 
 
 
 
 
 
 
 
 
 
 
 
 
 
 

A post shared by Jeevan Sai Jeeva (@saiichikkaballapura)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ಫಾರಿನ್ ಟೂರ್ ಮುಗಿಸಿ ಯಾವಾಗ ಬರ್ತಾರಪ್ಪಾ... ಕರ್ನಾಟಕ ಶಾಸಕರಿಗೆ ಕಾತುರತೆ ಹೆಚ್ಚಾಯ್ತು

ನಾಯಿಗೆ ಯಾಕ್ರೀ ಹೊಡೆದ್ರಿ ಎಂದು ಹೀರೋ ಆಗಲು ಹೊರಟ: ಕೊನೆಗೆ ಆತನಿಗೇ ನಾಯಿ ಮಾಡಿದ್ದು ನೋಡಿದ್ರೆ ಏನನ್ನಬೇಕು ನೀವೇ ಹೇಳಿ video

ಶೇ 90 ರಷ್ಟು ಕುಂಕುಮ ಬರೋದು ಇಸ್ಲಾಮಿಕ್ ರಾಷ್ಟ್ರಗಳಿಂದ: ಪ್ರಿಯಾಂಕ್ ಖರ್ಗೆ ವ್ಯಂಗ್ಯಕ್ಕೆ ನೆಟ್ಟಿಗರು ಏನಂದ್ರು ಗೊತ್ತಾ Video

Karnataka Weather: ಕರ್ನಾಟಕದ ಈ ಜಿಲ್ಲೆಗೆ ಇಂದು ಬಿರುಗಾಳಿ ಸಹಿತ ಮಳೆ ಸಾಧ್ಯತೆ

ಮುಂದಿನ ಸುದ್ದಿ
Show comments