Publish Date: Tue, 08 Sep 2026 (11:38 IST)
Updated Date: Tue, 08 Sep 2026 (11:40 IST)
ಬೆಂಗಳೂರು: ಬೀದಿ ಬದಿ ಹೋಟೆಲ್ ನಲ್ಲಿ ರೈತರ ಜೊತೆ ಇಡ್ಲಿ ಸವಿದ ಸಿಎಂ ಡಿಕೆ ಶಿವಕುಮಾರ್ ತಾವೇ ಎಲ್ಲರ ಬಿಲ್ ಕೊಟ್ಟು ಹೃದಯವಂತಿಕೆ ಮೆರೆದಿದ್ದಾರೆ.
ಇಂದು ಬೆಳಿಗ್ಗೆ ಯಶವಂತಪುರ ಎಪಿಎಂಸಿಗೆ ದಿಡೀರ್ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್ ರೈತರು, ವ್ಯಾಪಾರಸ್ಥರ ಕಷ್ಟ-ಸಮಸ್ಯೆಗಳನ್ನು ಆಲಿಸಿದ್ದಾರೆ. ಈರುಳ್ಳಿ ಮೂಟೆಗಳ ನಡುವೆ ಸಾಮಾನ್ಯರಂತೆ ಕುಳಿತು ವ್ಯಾಪಾರಿಗಳು ಮತ್ತು ರೈತರನ್ನು ಮಾತನಾಡಿಸಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಇಷ್ಟಕ್ಕೇ ಸುಮ್ಮನಾಗಲಿಲ್ಲ. ತಮ್ಮ ಜೊತೆಗೆ ಒಂದಷ್ಟು ರೈತರು ಮತ್ತು ವ್ಯಾಪಾರಿಗಳನ್ನು ಕರೆದುಕೊಂಡು ಹೋಗಿ ರಸ್ತೆ ಬಳಿಯ ಪುಟ್ಟ ಹೋಟೆಲ್ ನಲ್ಲಿ ಇಡ್ಲಿ, ಸಾಂಬಾರ್ ಪಡೆದು ಕಟ್ಟೆ ಮೇಲೆ ಕೂತು ತಿಂಡಿ ಸವಿದಿದ್ದಾರೆ.
ಇಡ್ಲಿ ತುಂಬಾ ರುಚಿಯಾಗಿದೆ ಎಂದು ಹೋಟೆಲ್ ಮಾಲಿಕನಿಗೆ ಹೊಗಳಿಕೆ ನೀಡಿದ್ದಲ್ಲದೆ, ಹೋಗುವ ಮೊದಲು ತಮ್ಮ ಜೇಬಿನಿಂದ 500 ರೂಗಳ ನೋಟು ತೆಗೆದು ಹೋಟೆಲ್ ಮಾಲಿಕನಿಗೆ ನೀಡಿ ಇವರದ್ದು ಯಾರದ್ದೂ ದುಡ್ಡು ಇಸ್ಕೋಬೇಡ ಎಂದು ಹೇಳಿ ಹೋಗಿದ್ದಾರೆ. ಡಿಕೆಶಿ ವರ್ತನೆ ನೆಟ್ಟಿಗರ ಮನಗೆದ್ದಿದೆ. ಈ ವಿಡಿಯೋ ಇಲ್ಲಿದೆ ನೋಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ