Select Your Language

Notifications

webdunia
webdunia
webdunia
webdunia

ಬೀದಿ ಬದಿ ಹೋಟೆಲ್ ನಲ್ಲಿ ರೈತರ ಜೊತೆ ಇಡ್ಲಿ ಸವಿದು ಸಿಎಂ ಡಿಕೆ ಶಿವಕುಮಾರ್ ಎಷ್ಟು ರೂಪಾಯಿ ಬಿಲ್ ಕೊಟ್ರು ನೋಡಿ Video

CM DK Shivakumar
ಬೆಂಗಳೂರು: ಬೀದಿ ಬದಿ ಹೋಟೆಲ್ ನಲ್ಲಿ ರೈತರ ಜೊತೆ ಇಡ್ಲಿ ಸವಿದ ಸಿಎಂ ಡಿಕೆ ಶಿವಕುಮಾರ್ ತಾವೇ ಎಲ್ಲರ ಬಿಲ್ ಕೊಟ್ಟು ಹೃದಯವಂತಿಕೆ ಮೆರೆದಿದ್ದಾರೆ.

ಇಂದು ಬೆಳಿಗ್ಗೆ ಯಶವಂತಪುರ ಎಪಿಎಂಸಿಗೆ ದಿಡೀರ್ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್ ರೈತರು, ವ್ಯಾಪಾರಸ್ಥರ ಕಷ್ಟ-ಸಮಸ್ಯೆಗಳನ್ನು ಆಲಿಸಿದ್ದಾರೆ. ಈರುಳ್ಳಿ ಮೂಟೆಗಳ ನಡುವೆ ಸಾಮಾನ್ಯರಂತೆ ಕುಳಿತು ವ್ಯಾಪಾರಿಗಳು ಮತ್ತು ರೈತರನ್ನು ಮಾತನಾಡಿಸಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಇಷ್ಟಕ್ಕೇ ಸುಮ್ಮನಾಗಲಿಲ್ಲ. ತಮ್ಮ ಜೊತೆಗೆ ಒಂದಷ್ಟು ರೈತರು ಮತ್ತು ವ್ಯಾಪಾರಿಗಳನ್ನು ಕರೆದುಕೊಂಡು ಹೋಗಿ ರಸ್ತೆ ಬಳಿಯ ಪುಟ್ಟ ಹೋಟೆಲ್ ನಲ್ಲಿ ಇಡ್ಲಿ, ಸಾಂಬಾರ್ ಪಡೆದು ಕಟ್ಟೆ ಮೇಲೆ ಕೂತು ತಿಂಡಿ ಸವಿದಿದ್ದಾರೆ.

ಇಡ್ಲಿ ತುಂಬಾ ರುಚಿಯಾಗಿದೆ ಎಂದು ಹೋಟೆಲ್ ಮಾಲಿಕನಿಗೆ ಹೊಗಳಿಕೆ ನೀಡಿದ್ದಲ್ಲದೆ, ಹೋಗುವ ಮೊದಲು ತಮ್ಮ ಜೇಬಿನಿಂದ 500 ರೂಗಳ ನೋಟು ತೆಗೆದು ಹೋಟೆಲ್ ಮಾಲಿಕನಿಗೆ ನೀಡಿ ಇವರದ್ದು ಯಾರದ್ದೂ ದುಡ್ಡು ಇಸ್ಕೋಬೇಡ ಎಂದು ಹೇಳಿ ಹೋಗಿದ್ದಾರೆ. ಡಿಕೆಶಿ ವರ್ತನೆ ನೆಟ್ಟಿಗರ ಮನಗೆದ್ದಿದೆ. ಈ ವಿಡಿಯೋ ಇಲ್ಲಿದೆ ನೋಡಿ.

pic.twitter.com/gXCZuRaDRI

 

— ವೀರ ಬಲ್ಲಾಳ (@nagarjun__S) September 8, 2026

Share this Story:

Follow Webdunia kannada

ಮುಂದಿನ ಸುದ್ದಿ

ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು… ಈರುಳ್ಳಿ ಮೂಟೆ ಮೇಲೆ ಕೂತು ರೈತರ, ವ್ಯಾಪಾರಿಗಳ ಸಮಸ್ಯೆ ಕೇಳಿದ ಸಿಎಂ ಡಿಕೆಶಿ Video