ಉಳ್ಳಾಲ ಬ್ಯಾಂಕ್ ದರೋಡೆ ಮಾಡಲು ಕಳ್ಳರ ಖತರ್ನಾಕ್ ಪ್ಲ್ಯಾನ್ ರಿವೀಲ್

Krishnaveni K
ಶನಿವಾರ, 18 ಜನವರಿ 2025 (14:07 IST)
Photo Credit: X
ಮಂಗಳೂರು: ಉಳ್ಳಾಲ ಬ್ಯಾಂಕ್ ದರೋಡೆ ಮಾಡಲು ಕಳ್ಳರ ಖತರ್ನಾಕ್ ಪ್ಲ್ಯಾನ್ ಒಂದೊಂದೇ ಬಯಲಾಗುತ್ತಿದೆ. ಪೊಲೀಸರ ದಿಕ್ಕುತಪ್ಪಿಸಲು ಕಳ್ಳರು ಸಾಕಷ್ಟು ಪ್ಲ್ಯಾನ್ ಮಾಡಿದ್ದರು. ಅದೀಗ ತನಿಖೆಯಲ್ಲಿ ಬಹಿರಂಗವಾಗುತ್ತಿದೆ.

ಸಿಎಂ ಸಿದ್ದರಾಮಯ್ಯ ಭೇಟಿ ಸಂದರ್ಭದಲ್ಲಿಯೇ ಕಳ್ಳರು ಹೊಂಚು ಹಾಕಿ ದರೋಡೆ ಮಾಡಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಗಮನವೆಲ್ಲಾ ಮಂಗಳೂರಿನಲ್ಲಿ ಸಿಎಂ ಕಾರ್ಯಕ್ರಮದ ಮೇಲಿರುತ್ತದೆ ಎಂಬ ಕಾರಣಕ್ಕೆ ಇದೇ ದಿನವನ್ನು ಆರಿಸಿಕೊಂಡಿದ್ದರು.

ಇನ್ನು, ಕಳ್ಳತನ ಮಾಡಿದ ಮೇಲೆ ತಮ್ಮ ಗುರುತು ಪತ್ತೆಯಾಗದಂತೆ ಒಂದೇ ರೀತಿಯ ಎರಡು ಕಾರು ಬಳಕೆ ಮಾಡಿದ್ದರು. ಈ ಪೈಕಿ ಒಂದು ಕಾರು ಮಂಗಳೂರಿನ ಕಡೆಗೆ ತೆರಳಿದ್ದರೆ ಇನ್ನೊಂದು ಕಾರು ಕೇರಳದ ಕಡೆಗೆ ತೆರಳಿದೆ.

ಕಳ್ಳತನ ಮಾಡಿದ ಬಳಿಕ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಈ ಮೊಬೈಲ್ ನ್ನು ಮಂಗಳೂರು ನಗರದ ಕಡೆಗೆ ಬಂದು ಹೆಜಮಾಡಿ ಬಳಿ ಬಿಸಾಕಿ ಹೋಗಿದ್ದಾರೆ. ಪೊಲೀಸರು ಆ ಮೊಬೈಲ್ ಟ್ರೇಸ್ ಮಾಡಿದರೆ ಮಂಗಳೂರು ಕಡೆಗೆ ಆರೋಪಿಗಳಿದ್ದಾರೆ ಎಂದು ದಿಕ್ಕುತಪ್ಪಿಸಲು ಈ ಪ್ರಯತ್ನ ನಡೆಸಿರುವ ಸಾಧ್ಯತೆಯಿದೆ.

ಹೀಗಾಗಿ ಹಣವಿರುವ ಡಕಾಯಿತರ ಕಾರು ಕೇರಳ ಕಡೆಗೆ ಹೋಗಿರಬಹುದೇ ಅಥವಾ ಮಂಗಳೂರು ಕಡೆಗೆ ಹೋಗಿರಬಹುದೇ ಎಂದು ಪೊಲೀಸರು ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಕೇರಳಕ್ಕೂ ಪೊಲೀಸರ ತಂಡ ಹೋಗಿ ಪರಿಶೀಲನೆ ನಡೆಸುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಓಲಾ, ಉಬರ್ ಆಪ್ ನಲ್ಲಿ ತೋರಿಸುವ ನಂಬರ್ ಬೇರೆ, ಆಟೋದಲ್ಲಿ ಇರೋದೇ ಬೇರೆ ಅಂದರೆ ಹುಷಾರ್: ಪೊಲೀಸರ ಎಚ್ಚರಿಕೆ ಗಮನಿಸಿ

ಡಿಕೆ ಶಿವಕುಮಾರ್ ಜೊತೆ ರಾಹುಲ್ ಗಾಂಧಿ ಜೊತೆ ಸಚಿವರ ಪಟ್ಟಿ ಅಂತಿಮಗೊಳಿಸಲು ಬರಲ್ಲ ಎಂದಿದ್ದೇಕೆ ಸಿದ್ದರಾಮಯ್ಯ

ಬಡ ವ್ಯಾಪಾರಿ ಹೊಟ್ಟೆ ಮೇಲೆ ಹೊಡೆದ್ರಲ್ಲೋ... ಐಸ್ ಕ್ರೀಂ ವ್ಯಾಪಾರಿಯ 500 ರೂ ಕದ್ದೊಯ್ದರು Video

ರೈಲಿನ ಎಸಿ ಕೋಚ್ ನಲ್ಲಿ ದೀಪ, ಧೂಪ ಹಚ್ಚಿ ಪೂಜೆ ಶುರು ಹಚ್ಚಿಕೊಂಡ ಭೂಪ: ಮುಂದೇನಾಯ್ತು ನೋಡಿ Video

ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಹುಡುಗಿ ಕತೆ ಈಗ ಏನಾಗಿದೆ ನೋಡಿ video

ಮುಂದಿನ ಸುದ್ದಿ
Show comments