Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಅವರಿಬ್ಬರೂ ಒಂದೆ ಗ್ರಾಮದವರು ಇನ್ನು ಬದುಕಿ ಬಾಳಬೇಕಾದವರು. ಆದ್ರೆ ಪ್ರೀತಿ ಹೆಸರಿನಲ್ಲಿ ಈ ಇಬ್ಬರು ಪ್ರೇಮಿಗಳು ಆತ್ಮಹತ್ಯಗೆ ಶರಣಾಗಿದ್ದಾರೆ..ಚೈತನ್ಯ ಹಾಗು ಶಿರಿಚ್ಚಂದ್ರ ಮೃತ ದುರ್ಧೈವಿಗಳು..ಬಹಳ ವರ್ಷದಿಂದ ಪ್ರಿತಿಸುತ್ತಿದ್ದ ಈ ಇಬ್ಬರು ನೆನ್ನೆ ದಿನ ಬೈಯಪ್ಪನಹಳ್ಳಿಯ ರೈಲ್ವೇ ಟ್ರ್ಯಾಕ್ ನಲ್ಲಿ ಆತ್ಮಹತ್ಯಗೆ ಶರಣಾಗಿದ್ದಾರೆ..ಇನ್ನು ಇಬ್ಬರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಣ್ಣ ಮಂಗಲ ಗ್ರಾಮದವರು ಇಬ್ಬರು ಒಂದೆ ಊರಿನವರು ಒಂದೆ ಜಾತಿಯವರು ಕೂಡ ಆಗಿದ್ರು..ಆದ್ರೆ ಇವರ ಪ್ರೀತಿಯ ಮನೆಯವರ ವಿರೋಧವಿತ್ತು ಎಂಬ ಮಾತುಗಳು ಕೇಳಿ ಬಂದಿದೆ ಇದರಿಂದ ಮನನೊಂದು ಆತ್ಮಹತ್ಯೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿದೆ ಆದ್ರೆ ಯುವಕನ ಪೋಷಕರು ಇದು ಆತ್ಮಹತ್ಯೆಯಲ್ಲ ಅಂತಾ ಅನುಮಾನ ವ್ಯಕ್ತಪಡಿಸ್ತಾ ಇದ್ದಾರೆ..ಇನ್ನು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಪ್ರೇಮಿಗಳ ಸಾವಿಗೆ ಕಾರಣ ಏನು ಎಂದು ತನಿಖೆ ಆರಂಭಿಸಿದ್ದಾರೆ.