Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚಿಕ್ಕೋಡಿ ಉಪವಿಭಾಗದಲ್ಲಿ ಬಿರುಗಾಳಿ ಹೊಡೆತಕ್ಕೆ ಬೃಹತ್ ಮರಗಳು ಧರೆಗೆ ಉರುಳಿದ್ದು, ಹಲವು ತೆಂಗಿನ ಮರಗಳು, ಮಾವಿನ ಮರಗಳು ನೆಲಕಚ್ಚಿವೆ. ಅಥಣಿ ತಾಲೂಕಿನ ತೇಲಸಂಗ್ ಹೋಬಳಿಯಲ್ಲಿ ಮಳೆ ಗಾಳಿಗೆ ಅಪಾರ ಹಾನಿಯಾಗಿದೆ. ಗುಡುಗು ಸಿಡಿಲಿನ ತೀವ್ರತೆಗೆ ಜನ ಬೆಚ್ಚಿಬಿದಿದ್ದಾರೆ. ಭಾರಿ ಗಾಳಿಯಿಂದಾಗಿ ಹಲವು ಮನೆಗಳ ಮೇಲ್ಛಾವಣಿ ಹಾರಿಹೋಗಿದ್ದು, ಅಪಾರ ಪ್ರಮಾಣದ ಬೆಳೆ ಮಣ್ಣುಪಾಲಾಗಿವೆ.