ದುಬಾರಿ ಮೌಲ್ಯದ ಸೈಕಲ್ ಕಳವು ಮಾಡಿದ ಕಳ್ಳರು

Webdunia
ಬುಧವಾರ, 22 ಸೆಪ್ಟಂಬರ್ 2021 (21:47 IST)
ಬೆಂಗಳೂರು: ದುಬಾರಿ ಮೌಲ್ಯದ ಸೈಕಲ್ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
ಸಿಟಿ ಮಾರ್ಕೆಟ್ ಕೂಲಿ ಕಾರ್ಮಿಕ ರಫೀಕ್ ಮತ್ತು ದೊಡ್ಡಬಳ್ಳಾಪುರದ ಆದಿಲ್ ಬಂಧಿತ ಆರೋಪಿಗಳು.
ಸುಮಾರು 10 ಸಾವಿರದಿಂದ 80 ಸಾವಿರ ರೂ. ಮುಖಬೆಲೆಯ 10 ಲಕ್ಷ ರೂ. ಮೌಲ್ಯದ ಒಟ್ಟು 45 ಸೈಕಲ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಟಿ ಮಾರ್ಕೆಟ್‌ನಲ್ಲಿ ಕೂಲಿ ಕೆಲಸಗಾರ ರಫೀಕ್, ಪ್ರತಿಷ್ಠಿತ ಕಂಪನಿಯ ಸೈಕಲ್‌ಗಳನ್ನು ಕಳವು ಮಾಡಿದರೆ ಹೆಚ್ಚಿನ ಹಣ ಸಿಗುತ್ತದೆ ಮತ್ತು ಪೊಲೀಸರು ಸಹ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ಲ್ಯಾನ್ ಮಾಡಿ ದೊಡ್ಡಬಳ್ಳಾಪುರದ ತನ್ನ ಸ್ನೇಹಿತ ಆದಿಲ್‌ಗೆ ಹಣದ ಆಮಿಷವೊಡ್ಡಿದ್ದ. ಆನಂತರ ಇಬ್ಬರು ಸೇರಿಕೊಂಡು ಕೆಲ ತಿಂಗಳಿಂದ ಸಂಜೆ ವೇಳೆ ಶ್ರೀಮಂತರ ಬಡಾವಣೆಗಳಲ್ಲಿ ಸುತ್ತಾಡಿಕೊಂಡು ಮನೆ ಬಳಿ ನಿಲ್ಲಿಸಿರುವ ಸೈಕಲ್‌ಗಳನ್ನು ಗುರುತಿಸಿ ರಾತ್ರಿ ಸಮಯದಲ್ಲಿ ಹೋಗಿ ಕಳವು ಮಾಡುತ್ತಿದ್ದರು. ಸಂಜಯನಗರ, ಹೆಬ್ಬಾಳ, ಮಾರತ್ತಹಳ್ಳಿ, ನಂದಿನಿಲೇಔಟ್, ಯಲಹಂಕ ನ್ಯೂಟೌನ್, ಅಮೃತಹಳ್ಳಿ, ಹೈಗ್ರೌಂಡ್ ಸೇರಿದಂತೆ ನಗರದ ವಿವಿಧೆಡೆ ಬೆಲೆ ಬಾಳುವ ಸೈಕಲ್ ಕಳವು ಮಾಡುತ್ತಿದ್ದರು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳ ಚುನಾವಣೆಗೆ ಎಲ್‌ಡಿಎಫ್‌, ಬಿಜೆಪಿ ನಡುವೆ ಒಪ್ಪಂದ: ಪ್ರಿಯಾಂಕಾ ಗಾಂಧಿ

ಕಸ್ಟಡಿಯಲ್ಲಿ ತಂದೆ ಮಗ ಸಾವು, ತಮಿಳುನಾಡಿನ 9ಪೊಲೀಸರಿಗೆ ಮರಣದಂಡನೆ ಶಿಕ್ಷೆ

ದೇಶದ ಅತ್ಯಂತ ಭ್ರಷ್ಟ ಕುಟುಂಬ ಕಾಂಗ್ರೆಸ್‌ನವರು ಇಂದು ಇತರರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ: ಮೋದಿ ಗುಡುಗು

ಸದ್ಯಕ್ಕೆ ಕಚ್ಚಾ ತೈಲದ ಸಮಸ್ಯೆಯಿಲ್ಲ, ಆದರೆ ಆಟೋ ಚಾಲಕರು ಎಲ್‌ಪಿಜಿ ಬದಲು ಪೆಟ್ರೋಲ್ ಬಳಸಿ: ಪ್ರಹ್ಲಾದ್ ಜೋಶಿ

ದೇಶವನ್ನು ಮೋದಿ, ಕೇರಳವನ್ನು ಪಿಣರಾಯಿ ಬಿಟ್ಟು ಮುನ್ನಡೆಸಲು ಬೇರೆಯಾರಿಲ್ಲ ಎಂದು ಭಾವಿಸಿದ್ದಾರೆ: ರಾಹುಲ್ ಕಿಡಿ

ಮುಂದಿನ ಸುದ್ದಿ
Show comments