Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಬಸೋಳಿ ಗ್ರಾಮದಲ್ಲಿ ಜಾನುವಾರುವೊಂದರ ಮೇಲೆ ಚಿರತೆ ದಾಳಿ ಮಾಡಿದೆ. ದಾಳಿ ಮಾಡುತ್ತಿರುವ ದೃಶ್ಯ ಪ್ರಯಾಣಿಕರ ಮೊಬೈಲ್ನಲ್ಲಿ ಸೆರೆಯಾಗಿದೆ. ರಸ್ತೆಯ ಪಕ್ಕದಲ್ಲಿ ಮೇವು ತಿನ್ನುತ್ತಿದ್ದ ಆಕಳನ್ನು ಚಿರತೆ ಎಳೆದೊಯ್ದಿದ್ದು, ಪ್ರಯಾಣಿಕರು ಎಷ್ಟೆ ಕೂಗಾಡಿದ್ರೂ, ಚಿರತೆ ಆಕಳನ್ನು ಬಿಡದೆ ಕುತ್ತಿಗೆ ಹಿಡಿದು ಎಳೆದಾಡಿದೆ, ಚಿರತೆಯ ಆರ್ಭಟ ಕಂಡ ಪ್ರಯಾಣಿಕರು ತುಂಬಾ ಭಯಭೀತರಾಗಿದ್ದಾರೆ.