Publish Date: Mon, 06 Mar 2023 (16:50 IST)
Updated Date: Mon, 06 Mar 2023 (17:06 IST)
ಬಾಯಿ ಬಿಟ್ರೆ ಗೋ ರಕ್ಷಣೆ, ಗೋ ರಕ್ಷಣೆ ಅಂತ ಬಾಷಣ ಮಾಡೋ ಬಿಜೆಪಿ ಪಕ್ಷದ ಮುಖಂಡನ ಕೆಲಸ ನೋಡಿದ್ರೆ ಕರಳು ಚುರುಕ್ ಅನ್ನುತ್ತೆ.ಗೋವುಗಳನ್ನ ಕೆಲವು ಕಡುಕರು ಕಡಿದು ಗೋ ಭಕ್ಷಣೆ ಮಾಡಿದ್ರೆ ಈ ಬಿಜೆಪಿ ಮುಖಂಡನ ನಿರ್ಲಕ್ಷ್ಯಕ್ಕೆ ಗೋವುಗಳು ಬದುಕಿದ್ದಾಗಲೇ ನರಕಯಾತನೆ ಅನುಭವಿಸುತ್ತಿವೆ.
ಅಂದಹಾಗೇ ಈ ದೃಶ್ಯ ಕಂಡುಬಂದಿರೋದು ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿಯ ಬೈಯಂಡಹಳ್ಳಿಯಲ್ಲಿ. ಇಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಸುಗಳಿಗೆ ಹಗ್ಗ ಹಾಕಿ ಹರಸಾಹಸ ಪಟ್ಟು ಅವಗಳ ಜೀವ ಉಳಿಸೋ ಪ್ರಯತ್ನ ಮಾಡ್ತಿದ್ದಾರೆ. ಇದಕ್ಕೆಲ್ಲ ಕಾರಣ ಗ್ರಾನೈಟ್ ಬ್ಯುಸಿನೆಸ್. ಪಕ್ಕದಲ್ಲೆ ಇರೋ ಬಿಜೆಪಿ ನಾಯಕ ಚಂದ್ರಶೇಖರ್ ಅವ್ರ ಗ್ರಾನೈಟ್ ಫ್ಯಾಕ್ಟರಿ. ಗ್ರಾನೈಟ್ ಫ್ಯಾಕ್ಟರಿ ಯಿಂದ ಉಂಟಾಗುವ ತ್ಯಾಜ್ಯವನ್ನ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಈ ಸ್ಲಿಂಟ್ ಹೊಂಡದಲ್ಲಿ ಮನಷ್ಯರು ಬಿದ್ರು ಹೊರಗೆ ಬರುಲು ಸಾಧ್ಯವಿಲ್ಲ, ಆದ್ರೆ ಮೂಖ ಪ್ರಾಣಿಗಳು ಮೇಯಲು ಹೋಗಿ ಕಾಲು ಜಾರಿ ಸ್ಲಿಂಟ್ ಹೊಂಡಕ್ಕೆ ಬಿದ್ದು ನರಳಾಡ್ತಾವೆ. ಸಾರ್ವಜನಿಕರು ನೋಡಿದ್ರೆ ಮಾತ್ರ ಆ ಮೂಕ ಜೀವಿಳ ಪ್ರಾಣ ಉಳಿಯುತ್ತೆ.
ಇನ್ನೂ ಈರೀತಿ ಸ್ಲಿಂಟ್ ಹೊಂಡ ಮಾಡುವಾಗ ಸುತ್ತಲು ಕಾಂಪೌಂಟ್ ಇರ ಬೇಕು, ಆದರೆ ಹಣದಾಸೆಗೆ ಚಂದ್ರಶೇಕರ್ ಕಾಂಪೌಂಡ್ ನಿರ್ಮಿಸದೆ ತಮ್ಮಜಮೀನು ಅಂತ ಬೇರೆ ಫ್ಯಾಕ್ಟರಿಗಳಲ್ಲಿ ಉತ್ಪತಿಯಾಗುವ ತ್ಯಾಜ್ಯವನ್ನ ಹಣ ಪಡೆದು ತಮ್ಮ ಜಮೀನಿನಲ್ಲೆ ಬಿಡಿಸಿ ಗ್ರಾಮದ ಜಾನುವಾರುಗಳಿಗೆ ತೊಂದರೆ ಉಂಟು ಮಾಡ್ತಿದ್ದಾರೆ.
ಇನ್ನು ಈ ಬಗ್ಗೆ ಗ್ರಾಮಸ್ತರು ದೂರು ಕೊಟ್ರು ಅಧಿಕಾರಿಗಳು ತಲೆ ಕಡೆಸಿಕೊಳ್ತಿಲ್ಲ. ಇಗಾಗ್ಲೆ ನಾಲ್ಕರಿಂದ ಐದು ಗೋವುಗಳು ಹೊಂಡದಲ್ಲಿ ಬಿದ್ದು ಬದುಕುಳಿದಿವೆ. ಇನ್ನಾದ್ರು ಸಂಬಂದ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿದೆ.