Publish Date: Thu, 30 Jan 2020 (18:59 IST)
Updated Date: Thu, 30 Jan 2020 (19:02 IST)
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಹಾಲಿ ಸಚಿವ ಬಿ.ಶ್ರೀರಾಮುಲು ನಡುವೆ ವಾಕ್ಸಮರ ಮುಂದುವರಿದಿದೆ.
ರಾಜ್ಯದ ಬಿಜೆಪಿ ನೇತೃತ್ವದ ಸರಕಾರವು ಮಾಜಿ ಸಚಿವರಿಗೆ ನೀಡಿರೋ ಗನ್ ಮ್ಯಾನ್ ಗಳನ್ನು ಹಿಂದಕ್ಕೆ ಪಡೆದುಕೊಂಡಿರೋದು ಕ್ಷುಲ್ಲಕ ರಾಜಕೀಯ, ದ್ವೇಷದ ರಾಜಕಾರಣ ಬಿಜೆಪಿ ಮಾಡ್ತಿದೆ ಅಂತ ಡಿ.ಕೆ. ಶಿವಕುಮಾರ್ ಟೀಕೆ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರೋ ಸಚಿವ ಬಿ.ಶ್ರೀರಾಮುಲು, ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.
ಎಲ್ಲಾ ಪಕ್ಷದವರನ್ನು, ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುತ್ತೇವೆ. ಇದು ನಮ್ಮ ಪಾರ್ಟಿಯ ತತ್ವವೂ ಹೌದು ಅಂತ ರಾಮುಲು ಹೇಳಿದ್ದಾರೆ.
ಗನ್ ಮ್ಯಾನ್ ವಾಪಸ್ ಪಡೆದಿರೋ ಹಿಂದೆ ಯಾವ ರಾಜಕೀಯವೂ ಇಲ್ಲ ಅಂತ ಹೇಳಿದ್ದಾರೆ.