Publish Date: Fri, 26 Sep 2025 (12:49 IST)
Updated Date: Fri, 26 Sep 2025 (12:50 IST)
ಮೈಸೂರು: ಮೊನ್ನೆ ಇಹಲೋಕ ತ್ಯಜಿಸಿದ್ದ ಹಿರಿಯ ಬರಹಗಾರ ಪದ್ಮಭೂಷಣ ಎಸ್ಎಲ್ ಭೈರಪ್ಪನವರ ಅಂತಿಮ ಕ್ರಿಯೆಗಳು ಇಂದು ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ.
ಭೈರಪ್ಪನವರ ಕೊನೆಯಾಸೆಯಂತೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಪಾರ್ಥಿವ ಶರೀರಕ್ಕೆ ಬ್ರಾಹ್ಮಣ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಚಿತೆಗೆ ಅಗ್ನಿಸ್ಪರ್ಶ ಮಾಡಲಾಯಿತು.
ಭೈರಪ್ಪನವರ ಅಂತಿಮ ಇಚ್ಛೆಯಂತೆಯೇ ಅಂತ್ಯ ಕ್ರಿಯೆ ನಡೆದಿದೆ. ಪುತ್ರಿ ಸಹನಾ ವಿಜಯ್ ಕುಮಾರ್ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಪುತ್ರರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಅವರ ಅಂತ್ಯಕ್ರಿಯೆ ನೆರವೇರಿಸುವ ಬಗ್ಗೆ ಹಲವು ಗೊಂದಲಗಳು ಉಂಟಾಗಿದ್ದವು. ಎಸ್ಎಲ್ ಭೈರಪ್ಪನವರು ಬರೆದಿದ್ದಾರೆನ್ನಲಾದ ವಿಲ್ ಭಾರೀ ಸದ್ದು ಮಾಡಿತ್ತು. ಅವರ ಪುತ್ರರು ಅಂತ್ಯಕ್ರಿಯೆ ಮಾಡಬಾರದು ಎಂದು ವಿಲ್ ನಲ್ಲಿ ಬರೆದಿದ್ದರೆಂದು ಹೇಳಲಾಗಿತ್ತು.
Krishnaveni K
Publish Date: Fri, 26 Sep 2025 (12:49 IST)
Updated Date: Fri, 26 Sep 2025 (12:50 IST)