Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌ ವಿದಾಯ, ಸಚಿವರಿಗೆ ಮೆನುಗಿಂತ ಹುಲಿಯಾನ ಮಾತೇ ಮುಖ್ಯ

CM Siddaramaiah Breakfast Meeting
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಿರುವ ವದಂತಿ ನಡುವೆ ಸಿದ್ದರಾಮಯ್ಯ ಕರೆದಿರುವ ಬ್ರೇಕ್‌ಫಾಸ್ಟ್‌ ಸಭೆ ಭಾರೀ ಕುತೂಹಲವನ್ನು ಮೂಡಿಸಿದೆ. 

ಇದು ಸಿದ್ದರಾಮಯ್ಯ ಆಪ್ತ ವಲಯಕ್ಕೆ ತುಂಬಾ ಕಹಿಯಾಗಿರುವ ಬ್ರೇಕ್‌ಫಾಸ್ಟ್‌ ಆಗಿರುತ್ತದೆ. ಯಾಕೆಂದರೆ ಎಲ್ಲ ಆಯಾಮದಲ್ಲೂ ಸಿದ್ದು ರಾಜೀನಾಮೆ ನೀಡುತ್ತಿರುವುದು ಪಕ್ಕಾ ಆಗಿರುತ್ತದೆ. ಆದ್ದರಿಂದ ಸಿದ್ದರಾಮಯ್ಯ ಪಾಲಿನ ಬೆಂಬಲಿಗರು, ಶಿಷ್ಯರಿಗೆ ಸಿದ್ದರಾಮಯ್ಯ ಆಯೋಜನೆ ಮಾಡಿರುವ ಈ ಬ್ರೇಕ್‌ಫಾಸ್ಟ್‌ ತುಂಬಾನೇ ಕಹಿಯಾಗಿರುತ್ತದೆ. 

ಇಂದಿನ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಮೆನುಗಿಂತ ಸಚಿವರ ಮನಸ್ಸಿನಲ್ಲಿರುವ ಅಭಿಪ್ರಾಯವೇ ಮುಖ್ಯವಾಗಿರುತ್ತದೆ. ಸಿದ್ದರಾಮಯ್ಯ ಬೆಂಬಲಿಗರು ಈಗಾಗಲೇ ಹುಲಿಯಾನ ವಿದಾಯಕ್ಕೆಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ಸಿಎಂ ಕಾವೇರಿ ನಿವಾಸಕ್ಕೆ ಈಗಾಗಲೇ ಸಾಕಷ್ಟು ಸಚಿವರುಗಳು ಆಗಮಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಇದೀಗ ನಿವಾಸದ ಕಡೆ ಬರುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ರಾಜ್ಯದಲ್ಲಿ ಇಂದು ಮಳೆಯನ್ನೂ ನಿರೀಕ್ಷಿಸಬಹುದೇ, ಇಲ್ಲಿದೆ ವರದಿ