Publish Date: Thu, 16 Jul 2020 (18:43 IST)
Updated Date: Thu, 16 Jul 2020 (18:45 IST)
ಒಂದೆಡೆ ಕೊರೊನಾ ವೈರಸ್ ಹೆಚ್ಚುತ್ತಿರುವಂತೆ ಇನ್ನೊಂದೆಡೆ ರಾಜಕೀಯ ವಾಗ್ದಾಳಿಗಳು ತೀವ್ರಗೊಂಡಿವೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಸಚಿವ ಬಿ.ಶ್ರೀರಾಮುಲು ಟಾಂಗ್ ನೀಡಿದ್ದಾರೆ.
ನಾನು ಹೇಳಿರೋದನ್ನು ತಪ್ಪು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ಇನ್ನೂ ಎಡವಿದರೆ ದೇವರೇ ಗತಿ ಎಂದಿದ್ದೆ. ಆದರೆ ಇದು ಜನರಲ್ಲಿ ಜಾಗೃತಿ ಬರಬೇಕು ಎಂಬ ಅರ್ಥದಲ್ಲಿ ಹೇಳಿದ್ದಾಗಿ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಜನರ ಏಳಿಗೆಗಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸರಕಾರ ಕೆಲಸಮಾಡುತ್ತಿದೆ. ಮಾತು ಮಾತಿಗೆ ರಾಜೀನಾಮೆ ನೀಡಿ ಎಂದು ವಿಪಕ್ಷಗಳು ಕೇಳುವುದು ಸರಿಯಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.