Webdunia - Bharat's app for daily news and videos

Install App

ಏಸುವಿನ ಕರ್ತವ್ಯ ನಿರ್ವಹಿಸಿದೆ ಎಂದು ಶಿವಕುಮಾರ ಸ್ವಾಮೀಜಿ ಪುತ್ಥಳಿ ವಿರೂಪಗಳಿಸಿದವ ಅರೆಸ್ಟ್

Krishnaveni K
ಶುಕ್ರವಾರ, 6 ಡಿಸೆಂಬರ್ 2024 (10:25 IST)
ಬೆಂಗಳೂರು: ಏಸುವಿನ ಕರ್ತವ್ಯ ನಿರ್ವಹಿಸಿದೆ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರಸ್ವಾಮೀಜಿಗಳ ಪುತ್ಥಳಿಯನ್ನು ವಿರೂಪಗೊಳಿಸಿದ ಫುಡ್ ಡೆಲಿವರಿ ಬಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಡರಹಳ್ಳಿ ಸಮೀಪದ ಭರತನಗರ ನಿವಾಸಿ ಶಿವಕೃಷ್ಣ ಎಂಬ 34 ವರ್ಷದ ಯುವಕ ಬಂಧಿತ. ಆರೋಪಿ ನವಂಬರ್ 30 ರಂದು ಮಧ್ಯರಾತ್ರಿ ಗಿರಿನಗರದ ವೀರಭದ್ರನಗರದ ಬಸ್ ನಿಲ್ದಾಣದ ಬಳಿ ಪ್ರತಿಷ್ಠಾಪಿಸಿದ್ದ ಶಿವಕುಮಾರಸ್ವಾಮೀಜಿಗಳ ಪುತ್ಥಳಿ ವಿರೂಪಗೊಳಿಸಿದ್ದಾನೆ.

5 ವರ್ಷಗಳ ಹಿಂದೆ ಈ ಪ್ರತಿಮೆ ನಿರ್ಮಿಸಲಾಗಿತ್ತು. ಇದನ್ನು ಜಯಕರ್ನಾಟಕ ಸಂಘಟನೆ ನಿರ್ವಹಿಸುತ್ತಿದೆ. ಕ್ರೈಸ್ತ ಧರ್ಮದ ಪ್ರಭಾವದಿಂದ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಆರೋಪಿ ಅವಿವಾಹಿತ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಹಿಂದೂ ಧರ್ಮದ ಮೇಲೆ ಧ್ವೇಷ ಕಾರುತ್ತಿದ್ದ.

ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಕ್ಯೂ ಆರ್ ಕೋಡ್ ಇರುವ ಭಿತ್ತಿಪತ್ರ ಹಂಚುತ್ತಿದ್ದ. ಇದನ್ನು ಸ್ಕ್ಯಾನ್ ಮಾಡಿದರೆ ಬೈಬಲ್ ಸಿಗುತ್ತಿತ್ತು. ವಿಚಾರಣೆ ವೇಳೆ ಕನಸಿನಲ್ಲಿ ಏಸು ಬಂದು ಕೃತ್ಯ ಎಸಗುವಂತೆ ಹೇಳಿದ್ದ. ಅದಕ್ಕೇ ಏಸುವಿನ ಕರ್ತವ್ಯ ನಿರ್ವಹಿಸಿದ್ದೆ ಎಂದಿದ್ದಾನೆ. ಏಳು ವರ್ಷಗಳ ಹಿಂದೆಯೇ ಈತ ಹಿಂದೂ ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದು ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ ಸುತ್ತಿಗೆಯೊಂದಿಗೆ ಬಂದಿದ್ದ ಈತ ಪುತ್ಥಳಿ ಒಡೆಯಲು ಪ್ರಯತ್ನಿಸಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

HD Kumaraswamy, ಸತ್ತ ಸರಕಾರಕ್ಕೆ ಸಾಧನೆ ಸಮಾವೇಶ ಬೇರೆ ಕೇಡು: ಕುಮಾರಸ್ವಾಮಿ ಗರಂ

Siddaramaiah: ನಾವು ನುಡಿದಂತೆ ನಡೆದಿದ್ದೇವೆ, ನಮಗೆ ಎಲ್ಲಾ ಧರ್ಮವೂ ಒಂದೇ: ಸಿಎಂ ಸಿದ್ದರಾಮಯ್ಯ

Rahul Gandhi: ನಿಮ್ಮ ಹಣವನ್ನು ನಿಮಗೇ ಮರಳಿಸುವುದೇ ನಮ್ಮ ಉದ್ದೇಶ: ರಾಹುಲ್ ಗಾಂಧಿ

ಜನರ ಋಣ ತೀರಿಸಲು ಆರನೇಯ ಭೂ ಗ್ಯಾರಂಟಿ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್

Covid 19: ಮತ್ತೆ ಶುರುವಾಯ್ತು ಕೊರೋನಾ ಹಾವಳಿ: ಈಗ ಬಂದಿರುವ ಹೊಸ ವೈರಸ್ ಯಾವುದು

ಮುಂದಿನ ಸುದ್ದಿ
Show comments