Webdunia - Bharat's app for daily news and videos

Install App

ಶಿರೂರಿನಲ್ಲಿ ಪತ್ತೆಯಾಗಿದ್ದ ಕೇರಳ ಟ್ರಕ್ ಡ್ರೈವರ್ ಅರ್ಜುನ್ ನದ್ದು ಹೌದೋ, ಇಲ್ಲವೇ ಎನ್ನುವುದಕ್ಕೆ ಸಿಕ್ತು ಉತ್ತರ

Krishnaveni K
ಗುರುವಾರ, 8 ಆಗಸ್ಟ್ 2024 (11:13 IST)
ಶಿರೂರು: ಇತ್ತೀಚೆಗೆ ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡ ಕುಸಿತದಲ್ಲಿ ಸಿಲುಕಿದ್ದ ಕೇರಳ ಮೂಲದ ಟ್ರಕ್ ಡ್ರೈವರ್ ಅರ್ಜುನ್ ಸಿಕ್ಕಿಯೇಬಿಟ್ಟ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಪೊಲೀಸರು ಪತ್ತೆ ಮಾಡಿದ್ದ ಮೃತದೇಹ ಅರ್ಜುನ್ ನದ್ದು ಅಲ್ಲ ಎಂದು ತಿಳಿದುಬಂದಿದೆ.

ಶಿರೂರಿನಲ್ಲಿ ಗುಡ್ಡ ಕುಸಿತವಾಗಿ 20 ದಿನಗಳೇ ಆಗಿವೆ. ಇದುವರೆಗೆ ಗುಡ್ಡ ಕುಸಿತದಲ್ಲಿ ಸಿಲುಕಿದ್ದ ಕೇರಳ ಮೂಲದ ಟ್ರಕ್ ಡ್ರೈವರ್ ಅರ್ಜುನ್ ಮೃತದೇಹ ಸಿಕ್ಕಿಲ್ಲ. ಅರ್ಜುನ್ ಮಾತ್ರವಲ್ಲ ಉಳಿದ ಇಬ್ಬರ ಮೃತದೇಹವೂ ಸಿಕ್ಕಿಲ್ಲ. ಮೊನ್ನೆಯಷ್ಟೇ ಹೊನ್ನಾವರ ಸಮೀಪ ಸಮುದ್ರ ದಂಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು.

ಈ ಮೃತದೇಹ ಅರ್ಜುನ್ ನದ್ದು ಇರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಹೀಗಾಗಿ ಅರ್ಜುನ್ ಸಹೋದರನ ಮಾದರಿ ಪಡೆದು ಡಿಎನ್ ಎ ಮ್ಯಾಚ್ ಆಗುತ್ತದೆಯೇ ಎಂದು ಪರೀಕ್ಷೆ ನಡೆಸಲಾಗಿತ್ತು. ಆದರೆ ಪರೀಕ್ಷೆ ಬಳಿಕ ಇದು ಅರ್ಜುನ್ ಮೃತದೇಹವಲ್ಲ ಎಂದು ಪತ್ತೆಯಾಗಿದೆ.

ಬದಲಾಗಿ ಯಾರೋ ಮೀನುಗಾರನ ಶವ ಎಂದು ತಿಳಿದುಬಂದಿದೆ. ಅರ್ಜುನ್ ಮೃತದೇಹಕ್ಕಾಗಿ ಈಗಲೂ ಶೋಧ ಕಾರ್ಯ ನಡೆಯುತ್ತಲೇ ಇದೆ. ಈಗ ಸಿಕ್ಕಿರುವ ಮೃತದೇಹ ಅರ್ಜುನ್ ನದ್ದೇ ಇರಬಹುದು ಎಂದು ಕುಟುಂಬಸ್ಥರೂ ಭರವಸೆಯಲ್ಲಿದ್ದರು. ಆದರೆ ಅದೀಗ ಸುಳ್ಳಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ: ಸಾಧನಾ ಸಮಾವೇಶಕ್ಕೆ ಆರ್‌ ಅಶೋಕ್ ಆಕ್ರೋಶ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಬಿಡದಿಯ ಮೂಕ ಬಾಲಕಿಯ ಹತ್ಯೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌, ಸಿಸಿಟಿವಿಯಲ್ಲಿ ಸೆರೆಯಾಯಿತು ಸಾವಿನ ಅಸಲಿ ಕಾರಣ

ಏನ್ರಿ ಅದು ಕ್ಷಮೆ, ಮೊದಲು ನಡತೆಯಲ್ಲಿ ಬದಲು ಮಾಡಿಕೊಳ್ಳಿ: ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆಗೆ ವಿಜಯ್ ಶಾಗೆ ಗದರಿದ ಸುಪ್ರೀಂ

ಮುಂದಿನ ಸುದ್ದಿ
Show comments