Publish Date: Wed, 18 Oct 2023 (13:48 IST)
Updated Date: Wed, 18 Oct 2023 (13:17 IST)
ಜಗದೀಶ್ ಶೆಟ್ಟರ್ನ ರಮೇಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ನೋಡ್ರಿ
ಎಲ್ಲದರಲ್ಲೂ ಅನುಮಾನ ಯಾರ ಮೇಲೂ ಪಡೋದಕ್ಕೆ ಆಗಲ್ಲ.ಪಾಪ ಡಿಸ್ಪರೇಷನ್ನಲ್ಲಿದ್ದಾರೆ ಬಿಜೆಪಿಯವರು.ಡಿಸ್ಪರೇಷನ್ ಅಂದ್ರೆ ಅವರಿಗೆ,ಜನತಾದಳದವರಿಗೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಡಾಕ್ಟರ್ಸೇ ಅದರ ಮೆಜರ್ ಮಾಡಬೇಕು.ಶೆಟ್ಟರ್ ಅವರು, ಅವರ ಶಕ್ತಿ ಏನಿದೆ ಅಂತ ತೋರಿಸಿದ್ದಾರೆ.ನಾನೇನು ಹೆಚ್ಚು ಮಾತನಾಡಲ್ಲ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ರು.
ಇನ್ನೂ ಬಿಜೆಪಿಯಲ್ಲಿ ಆಪರೇಷನ್ ಮಾಡಲು ಒಂದು ಟೀಮ್ ಆಕ್ಟೀವ್ ಆಗಿರೋ ವಿಚಾರವಾಗಿ ಎಲ್ಲಾ ಎಂಎಲ್ಎ ಯಾರನ್ನ ಭೇಟಿ ಮಾಡ್ತಿದ್ದಾರೆ ಎಲ್ಲರೂ ನನಗೆ ಸಿಎಂಗೆ ಹೇಳ್ತಿದ್ದಾರೆ.ಏನ್ ಆಫರ್ ಮಾಡ್ತಿದ್ದಾರೆ ಅನ್ನೋದನ್ನೂ ಹೇಳಿದ್ದಾರೆ.ಅಸೆಂಬ್ಲಿ ನಡೆಯಲಿ ಯಾರೆಲ್ಲಾ ಮಾತನಾಡಲಿದ್ದಾರೆ ಎಲ್ಲಾ ಅಲ್ಲಿ ಮಾತಾಡ್ತೀನಿ ಎಂದು ಡಿಸಿಎಂ ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.