Webdunia - Bharat's app for daily news and videos

Install App

ಮದುವೆ ಆಗುವುದಾಗಿ ನಂಬಿಸಿ ನಟಿಗೆ ದೋಚಿದ ರೌಡಿ!

Webdunia
ಭಾನುವಾರ, 15 ಆಗಸ್ಟ್ 2021 (21:09 IST)

ಬುದ್ದಿವಂತ ಸಿನಿಮಾ ಮಾದರಿಯಲ್ಲಿ ನಟಿಯೊಬ್ಬಳಿಗೆ ತಾಳಿ ಕಟ್ಟಿ ಎರಡೂವರೆ ಲಕ್ಷ ರೂ. ಒಡವೆ ಜೊತೆ ರೌಡಿಯೊಬ್ಬ ಹೊತ್ತೊಯ್ದ ಘಟ

ನೆ ಬೆಂಗಳೂರಿನಲ್ಲಿ ನಡೆದಿದೆ.

ಹುಲಿಯೂರು ದುರ್ಗದ ಕುಖ್ಯಾತ ರೌಡಿ ತಮ್ಮ ಕುಣಿಗಲ್ ಗಿರಿ ಸ್ವಂತ ಅಣ್ಣ ರೌಡಿಶೀಟರ್ ಹರೀಶ್ ಈ ಕೃತ್ಯ ಎಸಗಿದ್ದು, ಹಲವು ಕೇಸ್ ಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ರೌಡಿ ಶೀಟರ್ ಹರೀಶ. ಕಳೆದ ವರ್ಷ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ವಾಸವಿರವು ನಟಿ ಹಿಂದೆ ಬಿದ್ದಿದ್ದ. ನಾನು ನಿನ್ನ ಪ್ರೀತಿಸ್ತಿನಿ . ನಿನ್ನನ್ನೆ ಮದುವೆಯಾಗ್ತೀನಿ ಅಂತ ಹೇಳಿದ್ದ. ಅದ್ರಂತೆ ಯುವತಿಯ ಮನೆಯಲ್ಲೆ ಆಕೆಗೆ ತಾಳಿ ಕಟ್ಟಿ ಮದುವೆಯಾಗಿದ್ದ.

ಮದುವೆಯಾದ ನಂತರ ಒಂದೆರಡು ದಿನ ಸಿನಿಮಾ ನಟಿ ಜೊತೆ ವಾಸವಿದ್ದ. ನಂತರ ಆಕೆಯ ಬಳಿಯಿದ್ದ ಎರಡೂವರೆ ಲಕ್ಷ ಹಣ 180 ಗ್ರಾಂ ಚಿನ್ನಾಭರಣ ಎಗರಿಸಿ ಎಸ್ಕೇಪ್ ಆಗಿದ್ದಾನೆ. ಕೃತ್ಯದ ನಂತರ ಈ ಬಗ್ಗೆ ಮೋಸಹೋದ ನಟಿ ಹರೀಶನನ್ನ ಕೇಳಿದ್ರೆ ನಾನು ಈಗಾಗಲೇ ಮದುವೆ ಆಗಿದ್ದೀನಿ. ದುಡ್ಡು ಕೊಡಲ್ಲ. ಒಡವೆನೂ ಕೊಡಲ್ಲ ಏನ್ ಮಾಡ್ತಿಯ ಮಾಡ್ಕೊ ಅಂದಿದ್ದಾನೆ. ಅಲ್ಲದೇ ಜೈಲಲ್ಲಿರೋ ತನ್ನ ಸಹೋದರ ರೌಡಿಶೀಟರ್ ಕುಣಿಗಲ್ ಗಿರಿ ಕಡೆಯಿಂದ ಪೊನ್ ಮಾಡಿಸಿದ್ದಾನೆ. ಜೈಲಿನಿಂದ ಪೊನ್ ಮಾಡಿರೋ ಕುಣಿಗಲ್ ಗಿರಿ ಕೊಟ್ಟಿರೋ ಪೊಲೀಸ್ ಕಂಪ್ಲೆಂಟ್ ವಾಪಸ್ ತಗೊ. ಇಲ್ಲ ಕೊಲೆ ಮಾಡ್ತೀವಿ ಅಂತ ಮೋಸಹೋದ ಸಿನಿಮಾ ನಟಿಗೆ ಜೀವಬೆದರಿಕೆ ಹಾಕಿದ್ದಾರೆ.

ಸದ್ಯ ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ಮೋಸ ಮಾಡಿರುವ ಹರೀಶ್ ಹಾಗೂ ಆತನ ಸಹೋದರ ಕುಣಿಗಲ್ ಗಿರಿ ವಿರುದ್ದ ದೂರು ದಾಖಲಾಗಿದೆ. ಎಫ್.ಐ.ಆರ್ ಆಗ್ತಿದ್ದಂತೆ ಆರೋಪಿ ಹರೀಶ್ ಎಸ್ಕೇಪ್ ಆಗಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡುರಸ್ತೆಯಲ್ಲಿ ಎಲ್ಲರೂ ಅಡ್ಡಾಡುತ್ತಿರುವಾಗಲೇ ವ್ಯಕ್ತಿಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು, Video

ಪಕ್ಷಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ಕೊಡುತ್ತಿದ್ದೇನೆ ಎಂದು ಕಣ್ಣೀರಿಟ್ಟ ಸಚಿವ ನಾಗೇಂದ್ರ, Video

ನೇಪಾಳದತ್ತ ಮೂರನೇ ಮಾನವೀಯ ನೆರವು ಹೊತ್ತ ಭಾರತದ ವಿಮಾನ

ತಲೆಮರೆಸಿಕೊಂಡಿರುವ ಅಧಿಕಾರಿ ಸಿಕ್ಕರೆ ಸರ್ಕಾರದ ಹಗರಣ ಬಯಲಿದೆ: ಪ್ರಹ್ಲಾದ್ ಜೋಶಿ ಕಿಡಿ

ವಾಲ್ಮೀಕಿ ನಿಗಮಕ್ಕೆ ಆ 185 ಕೋಟಿ ರೂ ಬರೋವರೆಗೂ ನಮ್ಮ ಹೋರಾಟ ನಿಲ್ಲಲ್ಲ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments