Publish Date: Tue, 03 Oct 2023 (14:26 IST)
Updated Date: Tue, 03 Oct 2023 (14:39 IST)
ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆ ಬಹುತೇಕ ಹಸಿರು ಮಾರ್ಗದ ಮೆಟ್ರೋ ಸೇವೆ ಸ್ಥಗಿತವಾಗಿದೆ. ಕೇವಲ ನಾಗಸಂದ್ರದಿಂದ ಯಶವಂತಪುರ ಹಾಗೂ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ವರೆಗೆ ಮಾತ್ರ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಲಭ್ಯವಾಗಿದೆ.ಪ್ರಯಾಣಿಕರು ಸಹಕರಿಸುವಂತೆ ನಮ್ಮ ಮೆಟ್ರೋ ಪ್ರಯಾಣಿಕರಲ್ಲಿ ಮನವಿ ಮಾಡಿದ್ದು,ಪ್ರಯಾಣಿಕರಿಗೆ BMRCL ಮಾಹಿತಿ ನೀಡಿದೆ.
ಯಶವಂತಪುರದ ಮೆಟ್ರೋ ಪ್ರವೇಶದ್ವಾರದ ಗ್ಲಾಸ್ ದಾಟಿ ಪ್ರಯಾಣಿಕರು ಹೋಗ್ತಿದ್ದು,ಯಶವಂತಪುರ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ ( ಶರ್ಟರ್ ) ಗಳನ್ನ ಮೆಟ್ರೋ ಸಿಬ್ಬಂದಿ ಕ್ಲೋಸ್ ಮಾಡಿದ್ದಾರೆ.ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಗಲಾಟೆ ನಡೆಸಿದ್ದಾರೆಮೆಟ್ರೋ ಪ್ರವೇಶ ದ್ವಾರವನ್ನ ಒದ್ದು ಪ್ರಯಾಣಿಕರ ಗಲಾಟೆ ನಡೆಸಿದ್ದು,ಪ್ರವೇಶದ್ವಾರದ ಗ್ಲಾಸ್ ದಾಟಿ ಪ್ರಯಾಣಿಕರು ಹೋಗ್ತಿದ್ದು,ಸದ್ಯ ಗಲಾಟೆ ಹಿನ್ನೆಲೆ ಮೆಟ್ರೋ ಬಾಗಿಲು ಬಂದ್ ಆಗಿದೆ.