ರೈಲು ಕೆಳಗೆ ಬಿದ್ದ ರಿಕ್ಷಾ ಚಾಲಕ: ಏನಾಯ್ತು ಗೊತ್ತಾ?

Webdunia
ಶುಕ್ರವಾರ, 15 ಫೆಬ್ರವರಿ 2019 (16:02 IST)
ರಿಕ್ಷಾ ಚಾಲಕರೊಬ್ಬರು ರೈಲಿನಡಿ ಬಿದ್ದು ಭೀಕರವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ರೈಲಿನಡಿಗೆ ಬಿದ್ದು ರಿಕ್ಷಾ ಚಾಲಕರೊಬ್ಬರು ಮೃತಪಟ್ಟ ಘಟನೆ ಹಾರಾಡಿ ಕರ್ಮಲ ಸಮೀಪ ನಡೆದಿದೆ. ಮೂಲತಃ ಕಡಬ ತಾಲೂಕಿನ ಏನೆಕಲ್ಲು ಕಲ್ಲಾಜೆ ದಿ. ವಾಮನ ಗೌಡರ ಪುತ್ರ  ರಿಕ್ಷಾ ಚಾಲಕ ನಾರಾಯಣ ಯಾನೆ ನಿತ್ಯ(48) ಮೃತಪಟ್ಟವರು.
ಪುತ್ತೂರಿನ ಹಾರಾಡಿಯ ನಂದಿಲ ಎಂಬಲ್ಲಿ ಕಳೆದ 7 ವರ್ಷಗಳಿಂದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು.

 ಫೆ. 3ರಂದು ಬೆಳಿಗ್ಗೆ ರಿಕ್ಷಾದಲ್ಲಿ ಹೋದ ಅವರು ಮತ್ತೆ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಫೆ. 13ರಂದು ಬಾಡಿಗೆ ಮನೆಯಿಂದ ತುಸು ದೂರದಲ್ಲಿರುವ ಕರ್ಮಲ ಎಂಬಲ್ಲಿ ಪಾಸೆಂಜರ್ ರೈಲಿನಡಿಗೆ ಅವರು ಬಿದ್ದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮೊದಲು ಮೃತದೇಹದ ಪತ್ತೆಯಾಗದ ಹಿನ್ನಲೆಯಲ್ಲಿ ರೈಲ್ವೇ ಪೊಲೀಸರು ಮೃತ ದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿಟ್ಟಿದ್ದರು. ಇದೀಗ ಮೃತ ದೇಹದ ಗುರುತು ಪತ್ತೆಯಾಗಿದೆ.  ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈಚೆಗೆ ಕೆಟ್ಟು ನಿಂತ ಮಾರ್ಗದಲ್ಲೇ ಮತ್ತೇ ಕೈಕೊಟ್ಟ ನಮ್ಮ ಮೆಟ್ರೋ, ಅಷ್ಟಕ್ಕೂ ಆಗಿದ್ದೇನೂ ಗೊತ್ತಾ

ಆರ್‌ಎಸ್‌ಎಸ್‌ನ್ನು ಪ್ರಶ್ನಿಸಿದರೆ ಬಿಜೆಪಿ ಬುಸುಗುವುದೇಕೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ

Video, ಕೈಚಾಚಿ ಐಸ್‌ಕ್ರೀಂ ಪಡೆಯಲು ಹೋಗಿ ಏನಾಯಿತು ನೋಡಿ

Video: ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದ ವಿಡಿಯೋ ನೋಡಿದಾಗ ಭಯ ಎನಿಸುತ್ತದೆ

ಮುಂದಿನ ಸುದ್ದಿ
Show comments