Webdunia - Bharat's app for daily news and videos

Install App

300 ಶ್ವಾನಗಳ ರಕ್ಷಕಿ ಮನೆ ನೆಲಸಮ

Webdunia
ಮಂಗಳವಾರ, 3 ಜನವರಿ 2023 (18:55 IST)
ದೆಹಲಿಯಲ್ಲಿ ದೇಹ ಕೊರೆಯುವಷ್ಟು ಚಳಿ ಇದೆ. ಮುಂದಿನ 5 ದಿನ ಶೀತ ಅಲೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಾನಗರ ಪಾಲಿಕೆ ಅಮಾನವೀಯವಾಗಿ ನಡೆದುಕೊಂಡಿದೆ. 80 ವರ್ಷದ ವೃದ್ಧೆ ವಾಸವಿದ್ದ ಮನೆಯನ್ನು ಅಕ್ರಮ ಎಂದು ಹೇಳಿ ನಾಶಪಡಿಸಿದೆ. ಹಿರಿಜೀವ ಈಗ ಬೀದಿಗೆ ಬಿದ್ದಿದ್ದು, ಚಳಿಗೆ ಮೈಯೊಡ್ಡಿ ಬದುಕಬೇಕಿದೆ. ದೆಹಲಿ ಮಹಾಪಾಲಿಕೆಯ ಸಿಬ್ಬಂದಿ, ಶ್ವಾನಪ್ರೇಮಿ ಪ್ರತಿಮಾದೇವಿ ಎಂಬ ಹಿರಿಜೀವದ ಮನೆಯನ್ನು ಒಡೆದು ಹಾಕಿ, ಸಾಮಾನು ಸರಂಜಾಮುಗಳನ್ನು ಅಲ್ಲಿಂದ ತೆಗೆದುಹಾಕಿದ್ದಾರೆ. ಇದರಿಂದ ವೃದ್ಧೆ ಈಗ ನಿರಾಶ್ರಿತರಾಗಿದ್ದಾರೆ. ಮರದ ಕೆಳಗೆ ಆಕೆ ಬದುಕು ಸವೆಯುವಂತಾಗಿದೆ. ನಾಯಿಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ವೃದ್ಧೆ 38 ವರ್ಷಗಳಿಂದ ಅವುಗಳ ಆರೈಕೆ ಮಾಡುತ್ತಿದ್ದಾರೆ. 300 ಬೀದಿನಾಯಿಗಳನ್ನು ತಾನು ನಿರ್ಮಿಸಿದ ಚಿಕ್ಕ ಗುಡಿಸಲಿನಲ್ಲಿ ಸಾಕುತ್ತಿದ್ದರು. ಪಾಲಿಕೆ ಸಿಬ್ಬಂದಿ ಆ ಶೆಲ್ಟರ್​ ನೆಲಸಮ ಮಾಡಿದ್ದಾರೆ. ಇದರಿಂದ ನಾಯಿಗಳು ಕೂಡ ಚಳಿಗೆ ನಡುಗುತ್ತಿವೆ. ಪಾಲಿಕೆಯವರು ನನ್ನ ಚಿಕ್ಕ ಗುಡಿಸಲನ್ನು ಅಕ್ರಮ ಎಂದು ಆರೋಪಿಸಿ ನೆಲಕ್ಕುರುಳಿಸಿದ್ದಾರೆ. ಇದರಿಂದ ನಾನು ರಸ್ತೆ ಪಕ್ಕದ ಮರದಡಿ ಜೀವನ ನಡೆಸುವಂತಾಗಿದೆ. 300 ಬೀದಿನಾಯಿಗಳನ್ನು ಸಾಕಿದ್ದೇನೆ. ಈಗ ಅವುಗಳೂ ಕೂಡ ಆಶ್ರಯ ಕಳೆದುಕೊಂಡಿವೆ. ಪ್ರಾಣಿಗಳ ಬಗ್ಗೆ ನಾನು ಚಿಂತಿತನಾಗಿದ್ದೇನೆ ಎಂದು ವೃದ್ಧ ಜೀವ ಹೇಳಿಕೊಂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DK Shivakumar: ನೀವು ಮನೆ ಸರಿಯಾಗಿ ಕಟ್ಟಿಕೊಳ್ಬೇಕು, ಆಗ ನೀರು ಬರಲ್ಲ: ಡಿಕೆ ಶಿವಕುಮಾರ್

Bengaluru Rains: ಬೆಳಿಗ್ಗೆಯಿಂದಲೇ ಶುರು ಮಳೆ, ಕಚೇರಿಗೆ ಹೋಗುವವರು ಗಮನಿಸಿ

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂದಿಲ್ಲ ಎಂದ ಡಿಕೆಶಿ: ಪ್ರತೀ ತಿಂಗಳು ಅಂದ್ರೆ ಏನರ್ಥ

Karnataka Weather: ಬೆಂಗಳೂರಿಗೆ ಇನ್ನೆಷ್ಟು ದಿನ ಮಳೆ, ಯಾವ ಜಿಲ್ಲೆಗೆ ಏನು ಅಲರ್ಟ್ ಇಲ್ಲಿದೆ ವಿವರ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಮುಂದಿನ ಸುದ್ದಿ
Show comments