Publish Date: Sun, 09 Apr 2023 (18:40 IST)
Updated Date: Sun, 09 Apr 2023 (18:22 IST)
ಕಾಂಗ್ರೆಸ್, ಜೆಡಿಎಸ್ನವರು ಬೋಧನೆ ನಿಲ್ಲಿಸಿ ಎಂದು ಆಗ್ರಹಿಸಿದರು. ಕಾಂಗ್ರೆಸ್ ಹುಲಿಗಳು ಗುಹೆ ಸೇರಿವೆ ಎಂದು ಟೀಕಿಸಿದರು. ಪ್ರಾಣಿಹತ್ಯೆ ಮಾಡುವವರು ನಾವಲ್ಲ. ಮನುಷ್ಯರು, ಪ್ರಾಣಿಗಳ ರಕ್ಷಣೆ ಜವಾಬ್ದಾರಿ ನಮ್ಮದು. ಇದನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಲಿ ಎಂದು ಆಗ್ರಹಿಸಿದರು....ನೆರೆ ಬಂದ ಸಂದರ್ಭದಲ್ಲಿ ನಮ್ಮ ಎಲ್ಲ ಸಚಿವಸಂಪುಟ, ಶಾಸಕರು ಮಾತ್ರವಲ್ಲದೆ ಪಕ್ಷದ ಪದಾಧಿಕಾರಿಗಳು ಸೇರಿ ನಾವೆಲ್ಲರೂ ಓಡಾಡಿದ್ದೇವೆ. ಜನತೆಗೆ ನಮ್ಮ ಸರಕಾರ ನೆರವಾಗಿದೆ. ಹಿಂದೆ ಮನೆ ಬಿದ್ದಾಗ 98 ಸಾವಿರ ಕೊಟ್ಟರೆ ನಾವು 5 ಲಕ್ಷ ಕೊಟ್ಟಿದ್ದೇವೆ. ಪ್ರವಾಹ ಬಂದಾಗ ಕೂಡಲೇ ದೋಣಿ, ಬೋಟ್ ಕಳುಹಿಸಿ ನೆರವಾಗಿದ್ದೇವೆ. ವಸತಿ, ಆಹಾರ ಸೌಕರ್ಯ ಕೊಟ್ಟಿದ್ದೇವೆ. ಮಾನವರ ಪ್ರಾಣ ಉಳಿಸಲು ಲಸಿಕೆ ಕೊಟ್ಟವರು ಯಾರು? ನಾವೇ ತಾನೇ ಫಸ್ಟ್? ನೊಣಗಳ ಥರ ಕೆಟ್ಟ ವಿಚಾರವನ್ನೇ ಚಿಂತಿಸದಿರಿ ಎಂದು ಕಿವಿಮಾತು ಹೇಳಿದರು.