Publish Date: Sat, 25 May 2019 (17:35 IST)
Updated Date: Sat, 25 May 2019 (17:37 IST)
ಲೋಕಸಮರದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವ ಬೆನ್ನಲ್ಲೇ ಇದೀಗ ರಮೇಶ್ ಜಾರಕಿಹೊಳಿ ಕಮಲ ಪಾಳೆಯದಲ್ಲಿ ಕಾಣಿಸಿಕೊಂಡಿದ್ದಾರೆ.
ಗೋಕಾಕ ಸಾಹುಕಾರ್ ಪೋಟೋ ಫುಲ್ ವೈರಲ್ ಆಗಿದೆ. ಬಿಜೆಪಿ ಸಂಸದ ಉಮೇಶ ಜಾಧವ್ ಗೆ ರಮೇಶ್ ಅಭಿನಂದನೆ ಸಲ್ಲಿಸಿದ್ದಾರೆ. ಪುಷ್ಪಗುಚ್ಛ ನೀಡಿ ರಮೇಶ ಜಾರಕಿಹೊಳಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ಪೋಟೋದಲ್ಲಿ ಉಮೇಶ ಜಾಧವ್, ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ ರಮೇಶ ಜಾರಕಿಹೊಳಿ.
ರಮೇಶ್ ಜಾರಕಿಹೊಳಿ ಕೇಸರಿ ಪಾಳೆಯದಲ್ಲಿ ಸಕ್ರಿಯ ಎಂಬುದಕ್ಕೆ ಈ ಪೋಟೋ ಸಾಕ್ಷಿಯಾಗುತ್ತಿದೆ. ದೋಸ್ತಿ ಸರ್ಕಾರಕ್ಕೆ ರಮೇಶ ಜಾರಕಿಹೊಳಿ ಶಾಕ್ ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಭೇಟಿಯಾದ ಡಾ.ಉಮೇಶ್ ಜಾಧವ್ ಮತ್ತು ಬಿಜೆಪಿ ನಾಯಕರ ಜೊತೆಗೆ ರಮೇಶ್ ಜಾರಕಿಹೋಳಿ ಮಾತುಕತೆ ನಡೆಸಿದ್ದಾರೆ.
ಮಾತುಕತೆ ಬಳಿಕ ಬಿಜೆಪಿ ಸಂಸದ ಜಾಧವ್ ರನ್ನು ಸನ್ಮಾನಿಸಿದ್ದಾರೆ ರಮೇಶ್ ಜಾರಕಿಹೋಳಿ. ಮಾಜಿ ಸಚಿವ ಸಿ. ಪಿ. ಯೋಗೇಶ್ವರ್, ಮಾಲಿಕಯ್ಯ ಗುತ್ತೇದಾರ್ ಇತರರಿದ್ದರು.