Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಗದಗ ಜಿಲ್ಲೆಯಲ್ಲಿ ಹಲವೆಡೆ ತಡರಾತ್ರಿ ದಾರಾಕಾರ ಮಳೆ ಸುರಿದಿದೆ. ಗಾಳಿ ಮಳೆ ರಭಸಕ್ಕೆ ಮನೆ ಮೇಲ್ಛಾವಣಿ ತಗಡುಗಳು ಹಾರಿ ಹೋಗಿದ್ದು, ಕುಟುಂಬಸ್ಥರಲ್ಲಿ ಆತಂಕ ಉಂಟಾಗಿದೆ. ಗದಗ ನಗರದ ಖಾನತೋಟ, ನಾಗಲಿಂಗ ನಗರ ಸೇರಿದಂತೆ ಅನೇಕ ಕಡೆ ಮಳೆ ಅವಾಂತರ ಸೃಷ್ಟಿಸಿದೆ. ಗೃಹೋಪಯೋಗಿ ವಸ್ತುಗಳು ನೀರಲ್ಲಿ ಮುಳುಗಡೆಯಾಗಿದ್ದು, ಜನ ರಾತ್ರಿ ಇಡಿ ಜಾಗರಣೆ ಮಾಡುವಂತಾಗಿದೆ. ನಗರದ ಜನತಾ ಕಾಲೋನಿಯಲ್ಲಿ ಬೃಹತ್ ಮರವೊಂದು ತಳ್ಳೊಗಾಡಿ ಹಾಗೂ ಮನೆಗೆ ವಾಲಿ ನಿಂತ ಪರಿಣಾಮ ಜನರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಮರ & ವಿದ್ಯುತ್ ಕಂಬಗಳು ಧರೆಗುರುಳಿವೆ.