Publish Date: Mon, 19 Mar 2018 (10:35 IST)
Updated Date: Mon, 19 Mar 2018 (10:37 IST)
ಬೆಂಗಳೂರು: ಕರ್ನಾಟಕದಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಯಾರ ಮಾತು ಕೇಳಬೇಕು ಎಂಬ ಬಗ್ಗೆ ಪೊಲೀಸರಲ್ಲೇ ಗೊಂದಲ ಶುರುವಾಗಿದೆಯಂತೆ.
ಹೀಗಂತ ಬಿಜೆಪಿ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಗೃಹಸಚಿವ ರಾಮಲಿಂಗಾ ರೆಡ್ಡಿ ಮತ್ತು ಪೊಲೀಸ್ ಇಲಾಖೆ ಸಲಹೆಗಾರ ಕೆಂಪಯ್ಯ ಮೂವರ ನಡುವೆ ಗೊಂದಲವಿದೆ. ಯಾರ ಮಾತು ಕೇಳಬೇಕು ಎಂಬ ಬಗ್ಗೆ ಪೊಲೀಸರಲ್ಲೇ ಗೊಂದಲ ಶುರುವಾಗಿದೆ.
ಸಿಎಂ ಸಿದ್ದರಾಮಯ್ಯ ಮಾತೆತ್ತಿದರೆ ಉಡಾಫೆ ಉತ್ತರ ನೀಡುತ್ತಾರೆ. ಕೆಂಪಯ್ಯ ಕಪಟ ನಾಟಕ ಸೂತ್ರಧಾರ. ಈಗ ಅವರ ಮಾತೇ ಫೈನಲ್. ಎಲ್ಲದಕ್ಕೂ ಅವರ ಮಾತೇ ಕೇಳ್ತಾರೆ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ