Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹಳ್ಳಿ ಹಳ್ಳಿಗಳಲ್ಲೂ ಪ್ರತಿಮೆಗಳ ಫೈಟ್ ಜೋರಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಗ್ರಾಮದಲ್ಲೂ ಕೂಡ ಕೆಂಪೇಗೌಡರ ಪ್ರತಿಮೆ ಮತ್ತು ಶಿವಕುಮಾರ ಸ್ವಾಮೀಜಿರವರ ಪ್ರತಿಮೆ ಅನಾವರಣ ಮಾಡಲು ಗ್ರಾಮಸ್ಥರು ಜಗಳ ಮಾಡಿದ್ದಾರೆ. ಏಕಾಏಕಿ ಒಂದು ಸಮುದಾಯದವರು ಕೆಂಪೇಗೌಡರ ಪುತ್ಥಳಿ ಅನಾವರಣ ಮಾಡಿದರೆ, ಅದೇ ಸ್ಥಳದಲ್ಲಿ ಶಿವಕುಮಾರ ಸ್ವಾಮೀಜಿಯ ಪ್ರತಿಮೆ ಅನಾವರಣ ಮಾಡಲು ಮತ್ತೊಂದು ಸಮುದಾಯ ಪಟ್ಟು ಹಿಡಿದಿದೆ. ಕೊಡಿಗೇಹಳ್ಳಿ ಸುತ್ತಮತ್ತ ಪೋಲಿಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.