Publish Date: Thu, 21 Apr 2022 (20:28 IST)
Updated Date: Thu, 21 Apr 2022 (20:30 IST)
ಮಸೀದಿಗಳಲ್ಲಿ ಆಜಾನ್ ಬ್ಯಾನ್ ವಿಚಾರಕ್ಕೆ ದೇವನಹಳ್ಳಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಸುಪ್ರಿಂ ಕೋರ್ಟ್ ದ್ವನಿವರ್ದಕಗಳಲ್ಲಿ ಎಷ್ಟು ಡೆಸಿಬಲ್ ಇರಬೇಕು ಅಂತ ಆದೇಶ ನೀಡಿದೆ. ಸೌಂಡ್ ಎಷ್ಟಿರಬೇಕು ಅಂತ ಹೇಳಿದೆ ಹೊರತು ದೇವಸ್ಥಾನ ಮಸೀದಿ ಅಂತಿಲ್ಲ. ಮಸೀದಿಯಲ್ಲಿ ಎಷ್ಟು ಬೇಕಾದ್ರು ಶಬ್ದ ಹಾಕಿ ಕೂಗಬಹುದು ಅಂತ ಹೇಳಿಲ್ಲ. ದೇವಸ್ಥಾನದಲ್ಲಿ ಎಷ್ಟು ಬೇಕಾದರು ಹಾಕಿ ಭಜನೆ ಮಾಡಿ ಅಂತಲು ಹೇಳಿಲ್ಲ. ಈ ನೆಲದ ಕಾನೂನು ಎಲ್ಲರಿಗೂ ಒಂದೇ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರವರೆಗೂ ಧ್ವನಿವರ್ದಕ ಬಳಸಲು ವಿಶೇಷ ಅನುಮತಿ ನೀಡಿಲ್ಲ, ಅದನ್ನ ಎಲ್ಲರೂ ಪಾಲಿಸಬೇಕು. ಇನ್ನು ರಾಜ್ಯದಲ್ಲಿ SDPI, PFI ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಬ್ಯಾನ್ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳು ಶುರುವಾಗಿವೆ. ಸರ್ಕಾರ ಈ ಬಗ್ಗೆ ಎಲ್ಲಾ ಸಾಕ್ಷ್ಯಾಧಾರಗಳನ್ನ ಕಲೆ ಹಾಕುತ್ತಿದೆ ಎಂದ್ರು.