Publish Date: Tue, 04 Aug 2020 (19:21 IST)
Updated Date: Tue, 04 Aug 2020 (19:25 IST)
ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ನಾಡಿನ ಸಮಸ್ತ ಕೊರೊನಾ ಸೋಂಕಿತ ವ್ಯಕ್ತಿಗಳಿಗಾಗಿ ಬಿಜೆಪಿಯವರು ಪೂಜೆ ಸಲ್ಲಿಸಿದ್ದಾರೆ.
ಕೊರೊನಾ ಪೀಡಿತರೆಲ್ಲರೂ ಬೇಗ ಗುಣಮುಖರಾಗಲೆಂದು ಗದಗ ಜಿಲ್ಲೆಯ ಮುಂಡರಗಿಯ ಶ್ರೀ ಗುರು ರಾಘವೇಂದ್ರನಲ್ಲಿ ಮುಂಡರಗಿ ಬಿಜೆಪಿ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಕೊರೊನಾ ವೈರಸ್ ನಿಂದ ಶೀಘ್ರವಾಗಿ ಎಲ್ಲರೂ ಗುಣಮುಖರಾಗಲಿ ಎಂದು ಬಿಜೆಪಿ ಕಾರ್ಯಕರ್ತರು, ಮುಖಂಡರು ಪ್ರಾರ್ಥನೆ ಮಾಡಿದ್ದಾರೆ.