Publish Date: Thu, 28 Dec 2023 (17:40 IST)
Updated Date: Thu, 28 Dec 2023 (17:42 IST)
ಮಹಾಲಕ್ಷ್ಮೀ ಲೇಔಟ್ ಪೊಲೀಸರಿಂದ ವಂಚಕ ಸಂತೋಷ್ ಬಂಧನ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ದಯಾನಂದ್ ಪ್ರತಿಕ್ರಿಯಿಸಿದ್ದಾರೆ.ಮಹಾಲಕ್ಷ್ಮೀ ಲೇಔಟ್ ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಕಂಪನಿಯ ಪಾರ್ಟ್ನರ್ ಶಿಪ್ ತೆಗೆದುಕೊಂಡು ವಂಚನೆ ಮಾಡಿಕೊಂಡಿದ್ದ.ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ.ದೊಡ್ಡವರ ಕಚೇರಿ ಹೆಸರು ಹೇಳಿಕೊಂಡು ಬಹಳಷ್ಟು ಜನರಿಗೆ ವಂಚನೆ ಮಾಡಿರೊ ಮಾಹಿತಿ ಬಂದಿತ್ತು.ಯಾರಿಗಾದರು ವಂಚನೆ ಮಾಡಿರೊ ಮಾಹಿತಿ ಕೊಟ್ರೆ ಪ್ರಕರಣ ದಾಖಲು ಮಾಡ್ತೀವಿ.ಮಠ ಮಾನ್ಯಗಳಿಗೂ ಭೇಟಿ ಕೊಟ್ಟು ನಂಬಿಕೆ ಬರುವಂತೆ ನಾಟಕ ಮಾಡ್ತಿದ್ದ ಎಂದು ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.