Webdunia - Bharat's app for daily news and videos

Install App

ಖಾಸಗಿ ಶಾಲೆಗಳ ಫೀಸ್ ನೋಡಿ ಪೋಷಕರು ಕಂಗಾಲು

Krishnaveni K
ಶನಿವಾರ, 23 ಮಾರ್ಚ್ 2024 (14:44 IST)
ಬೆಂಗಳೂರು: ಇನ್ನೇನು ಈ ಶೈಕ್ಷಣಿಕ ವರ್ಷ ಮುಗಿಯುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಖಾಸಗಿ ಶಾಲೆಗಳು ಈಗಾಗಲೇ ಪೋಷಕರಿಗೆ ಫೀಸ್ ವಿವರ ನೀಡಿದೆ. ಆದರೆ ಫೀಸ್ ಲಿಸ್ಟ್ ನೋಡಿದ ಪೋಷಕರು ಕಂಗಾಲಾಗಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಫೀಸ್ ಹೆಚ್ಚಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ನೀಡಿದ್ದರಿಂದ ಬಹುತೇಕ ಶಾಲೆಗಳು ಶುಲ್ಕ ಹೆಚ್ಚಿಸಿರಲಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಅಂತಹ ನಿರ್ಬಂಧವಿಲ್ಲ. ಹೀಗಾಗಿ ಕೊರೋನಾ ಸಂದರ್ಭದಲ್ಲಿ ನಷ್ಟವಾದ ಫೀಸ್ ನ್ನು ಈಗ ಬಡ್ಡಿ ಸಮೇತ ವಸೂಗಿಳಿದಂತೆ ಕಾಣುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿನ ಖಾಸಗಿ ಶಾಲೆಗಳ ಶುಲ್ಕ ಶೇ.30 ರಷ್ಟು ಏರಿಕೆಯಾಗಿದೆ. ಉದಾಹರಣೆಗೆ 50,000 ರೂ.ಗಳಿದ್ದ ಫೀಸ್ ಈಗ 65 ರಿಂದ 70 ಸಾವಿರ ರೂ.ವರೆಗೆ ಬಂದು ನಿಂತಿದೆ. ಇದಲ್ಲದೆ, ಬುಕ್ಸ್, ಯೂನಿಫಾರ್ಮ್ ಎಂದು ಹೆಚ್ಚುವರಿ ಫೀಸ್ ಕೇಳಲಾಗುತ್ತಿದೆ.

ಇದೇ ರೀತಿ ಮುಂದುವರಿದರೆ ಮಧ್ಯಮ ವರ್ಗದ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಷ್ಟವಾಗಲಿದೆ. ‘ಇದು ಯಾಕೆ ಹೀಗೆ ಎಂದು ಪೋಷಕರು ನೇರವಾಗಿ ಶಾಲೆಗಳನ್ನು ಕೇಳಿದರೆ ಕೊರೋನಾ ಸಂದರ್ಭದಲ್ಲಿ ನಾವು ರಿಯಾಯಿತಿ ನೀಡಿದ್ದೆವಲ್ಲ. ಈಗ ನಮಗೂ ಅನಿವಾರ್ಯ. ಹೀಗಾಗಿ ಹೆಚ್ಚಿಸಿದ್ದೇವೆ ಎನ್ನುತ್ತಿದ್ದಾರೆ’ ಎಂದು ಪೋಷಕರೊಬ್ಬರು ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಹೆಚ್ಚಿನ ಶಾಲೆಗಳಲ್ಲಿ ಜೂನ್ ತಿಂಗಳಿಗೆ ಮೊದಲ ಹಂತದ ಫೀಸ್ ಕಟ್ಟಲು ಗಡುವು ನೀಡಲಾಗುತ್ತದೆ. ಆದರೆ ಮೊದಲ ಹಂತದ ಶುಲ್ಕವೇ 40 ಸಾವಿರದ ಗಡಿ ದಾಟುತ್ತಿದೆ. ಅಂದರೆ ಒಮ್ಮೆಗೇ ಎರಡೇ ತಿಂಗಳಲ್ಲಿ ದುಬಾರಿ ಫೀಸ್ ಕಟ್ಟುವ ಅನಿವಾರ್ಯತೆ ಪೋಷಕರದ್ದಾಗಿದೆ. ಒಮ್ಮೆಗೇ ಇಷ್ಟೊಂದು ಫೀಸ್ ಕಟ್ಟದೇ ಇದ್ದರೆ ಪರೀಕ್ಷೆಗೆ ಅನುವು ಮಾಡಿಕೊಡುವುದಿಲ್ಲ ಎಂದು ಶಾಲಾ ಆಡಳಿತ ಮಂಡಳಿಗಳು ಎಚ್ಚರಿಕೆ ನೀಡುತ್ತಿವೆ. ಹೀಗಾಗಿ ಈ ಬಾರಿ ಖಾಸಗಿ ಶಾಲೆಗಳ ಶುಲ್ಕ ಪೋಷಕರ ಪಾಲಿಗೆ ಬಿಸಿ ತುಪ್ಪವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ಜವಹರಲಾಲ್ ನೆಹರೂ ಪಾಕಿಸ್ತಾನಕ್ಕೆ ನೀರು ಮಾತ್ರವಲ್ಲ ಹಣವನ್ನೂ ಕೊಟ್ಟಿದ್ದರು

ಬೆಂಗಳೂರು ಮಳೆಯಲ್ಲಿ ಮುಳುಗಿರುವಾಗ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ

DK Shivakumar: ನೀವು ಮನೆ ಸರಿಯಾಗಿ ಕಟ್ಟಿಕೊಳ್ಬೇಕು, ಆಗ ನೀರು ಬರಲ್ಲ: ಡಿಕೆ ಶಿವಕುಮಾರ್

Bengaluru Rains: ಬೆಳಿಗ್ಗೆಯಿಂದಲೇ ಶುರು ಮಳೆ, ಕಚೇರಿಗೆ ಹೋಗುವವರು ಗಮನಿಸಿ

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂದಿಲ್ಲ ಎಂದ ಡಿಕೆಶಿ: ಪ್ರತೀ ತಿಂಗಳು ಅಂದ್ರೆ ಏನರ್ಥ

ಮುಂದಿನ ಸುದ್ದಿ
Show comments