Webdunia - Bharat's app for daily news and videos

Install App

ದೀಪಿಕಾ ಪಡುಕೋಣೆ ಪರ ಸಚಿವ ಡಿ.ಕೆ.ಶಿವಕುಮಾರ್ ಬ್ಯಾಟಿಂಗ್

Webdunia
ಸೋಮವಾರ, 20 ನವೆಂಬರ್ 2017 (12:25 IST)
ಬಾಲಿವುಡ್‌ನ ಪದ್ಮಾವತಿ ಚಿತ್ರ ವಿವಾದದಿಂದಾಗಿ ಕನ್ನಡಾಂಬೆಯ ಹೆಮ್ಮೆಯ ಪುತ್ರಿಯಾದ ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆಯಿರುವುದರಿಂದ ಸೂಕ್ತ ರಕ್ಷಣೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವುದಾಗಿ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 
 
ದೀಪಿಕಾ ಪಡುಕೋಣೆ ತಲೆಗೆ 10 ಕೋಟಿ ರೂಪಾಯಿ ಆಫರ್ ನೀಡಿರುವ ಹರಿಯಾಣಾ ಬಿಜೆಪಿ ಮುಖಂಡ ಸುರಜ್‌ಪಾಲ್ ಅಮು, ವಿರುದ್ಧ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
 
ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಕನ್ನಡಾಂಬೆಯ ಹೆಮ್ಮೆಯ ಪುತ್ರಿಯಾಗಿದ್ದು,ದೇಶದ ಖ್ಯಾತ ಕ್ರೀಡಾಪಟುವಿನ ಪುತ್ರಿಯಾಗಿದ್ದಾರೆ. ಬಿಜೆಪಿ ಕೂಡಲೇ ದೀಪಿಕಾರ ಕ್ಷಮೆಯಾಚಿಸಬೇಕು. ಮುಂದೆ ಇಂತಹ ಹೇಳಿಕಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ದೀಪಿಕಾಗೆ ದೈಹಿಕ ಹಾನಿಯನ್ನು ಉಂಟುಮಾಡುವಂತೆ ಹಲವಾರು ಫ್ರಿಂಜ್ ಗುಂಪುಗಳು ಸಾರ್ವಜನಿಕವಾಗಿ ಬೆದರಿಕೆಯೊಡ್ಡಿದೆ. ಅವರ ಪ್ರತಿಭಟನೆ ಹಿನ್ನೆಲೆಯಲ್ಲಿ, ಸಂಜಯ್ ಲೀಲಾ ಭಾನ್ಸಾಲಿ ನಿರ್ದೇಶನದ ಪದ್ಮಾವತಿಯ ಡಿಸೆಂಬರ್ 1 ಬಿಡುಗಡೆಗೆ ಮುಂದೂಡಲಾಗಿದೆ. ಪಡುಕೋಣೆ ಮಾಜಿ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ ಪುತ್ರಿ ಮತ್ತು ಬೆಂಗಳೂರಿನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
 
ರಾಜಸ್ಥಾನದ ಕರಣಿ ಸೇನಾ ಸೇರಿದಂತೆ ಅನೇಕ ಸಂಘಟನೆಗಳು ದೀಪಿಕಾಗೆ ದೀವಬೆದರಿಕೆ ಹಾಕಿವೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ದೀಪಿಕಾಗೆ ಭಾರಿ ಭಧ್ರತೆಯನ್ನು ಒದಗಿಸಬೇಕು ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಂದನ್ ಶೆಟ್ಟಿ ಜೊತೆ ಭರ್ಜರಿ ಸ್ಟೆಪ್ ಹಾಕಿದ ಸಚಿವ ಕೃಷ್ಣಭೈರೇಗೌಡ: Video

ಕರ್ನಾಟಕ ನೂತನ ಸಚಿವರ ಪ್ರಮಾಣ ವಚನ ಇಂದು: ನೂತನ ಸಚಿವರ ಪಟ್ಟಿ ಇಲ್ಲಿದೆ

ಕಾಶೀ ವಿಶ್ವನಾಥನ ಸನ್ನಿಧಿಯಲ್ಲಿ ಕರ್ನಾಟಕದ ಮಹಿಳೆಗೆ ಮೋಸ ಮಾಡಿದ ನಕಲಿ ಪೂಜಾರಿ: ಪೊಲೀಸರು ಸ್ಥಳದಲ್ಲೇ ಮಾಡಿದ್ದೇನು Video

ಮೋದಿಯವರು ಜೆನ್ ಜಿ ಕ್ಷಮೆ ಕೇಳೋದಾ, ಅರೆಕ್ಷಣ ನಾನೇ ಕೆನ್ನೆ ಬಡ್ಕೊಂಡೆ: ಅನಂತನಾಗ್ ಹೇಳಿಕೆ ವೈರಲ್ Video

ಪತ್ನಿಯನ್ನು ಕೊಂದೇ ಬಿಡ್ತೇನೆ ಎಂದು ಅತ್ತೆ ಮನೆಗೆ ಗನ್ ಹಿಡ್ಕೊಂಡು ಬಂದ ಅಳಿಯ ಸೆಕೆಂಡಲ್ಲಿ ಥಂಡಾ ಹೊಡೆದಿದ್ಯಾಕೆ Video

ಮುಂದಿನ ಸುದ್ದಿ
Show comments